Tuesday, October 7, 2025

ಶ್ರೀ ಪರಶುರಾಮ ಸ್ತೋತ್ರ



ಧ್ಯಾನಂ

ಲೋಹಿತಾಂಬರಧರಂ ಘೋರಂ ರುದ್ರಮೂರ್ತಿಂ ಸುಭೀಷಣಮ್ |

ಪರಶುಖಡ್ಗಚಾಪಬಾಣಧಾರಿಣಂ ತೇಜೋರಾಶಿಮ್ ||

ರಕ್ತಚಂದನಲಿಪ್ತಾಂಗಂ ರಕ್ತಹಾರವಿಭೂಷಿತಮ್ |

ರೌದ್ರಭಾವಂ ಸ್ಮಿತಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ |


ಸ್ತೋತ್ರಂ

ಜಯ ಜಯ ಹೇ ಭಾರ್ಗವ ಶ್ರೇಷ್ಠಾ ಜಯ ಜಮದಗ್ನಿ ನಂದನ |

ಜಯ ರೇಣುಕಾ ಸುತ ರಮಣೀಯ ಜಯ ಜಯ ರುದ್ರಾವತಾರ ||


ಓಂ ಕ್ಷಾತ್ರದರ್ಪ ಹರಣಾಯ ನಮಃ

ಓಂ ಬ್ರಹ್ಮತೇಜೋ ವಿಭಾವಸವೇ ನಮಃ

ಓಂ ರೇಣುಕಾ ಹೃದಯಾನಂದಾಯ ನಮಃ

ಓಂ ಪಿತೃಭಕ್ತಿ ಪರಾಯಣಾಯ ನಮಃ ||


ಏಕವಿಂಶತಿ ಸಂಹಾರ ಕ್ರೋಧಾಗ್ನೇ ಸರ್ವದಾ ಜಯ |

ಸಪ್ತಾರ್ಣವ ಪರಿಕ್ಷಿಪ್ತ ಕ್ಷಿತಿಮಂಡಲ ಧಾರಕ ||


ಓಂ ರಣಧೂರಂಧರಾಯ ನಮಃ

ಓಂ ರೌದ್ರಮೂರ್ತಯೇ ನಮಃ

ಓಂ ರಕ್ತಾಂಬರಧರಾಯ ನಮಃ

ಓಂ ರಕ್ಷಿತ ಧರ್ಮ ಸಂಸ್ಥಾಪನಾಯ ನಮಃ ||


ಕಲ್ಪಾಂತ ಸಮಯ ಪ್ರಖ್ಯ ಭೀಮ ಪರಶು ಧಾರಿಣೇ |

ತ್ವದ್ಭಕ್ತಾನಾಂ ಭಯಂ ಹರ್ತ್ರೇ ಭವಬಂಧ ವಿಮೋಚನ ||


ಓಂ ರಾಮ ರಾಮೇತಿ ಗೀಯಮಾನ ನಾಮನೇ ನಮಃ

ಓಂ ರಾಘವ ಗುರುವೇ ನಮಃ

ಓಂ ಚಿರಂಜೀವಿನೇ ನಮಃ

ಓಂ ಪರಮ ಬ್ರಹ್ಮವಿತ್ಪರಾಯ ನಮಃ ||


ಫಲಶ್ರುತಿ

ಯಃ ಪಠೇತ್ ಪ್ರಾತರುತ್ಥಾಯ ಭಕ್ತಿಮಾನ್ ಸಂಯತೇಂದ್ರಿಯಃ |

ತಸ್ಯ ವೀರ್ಯಂ ಯಶೋ ಲಕ್ಷ್ಮೀರ್ಜ್ಞಾನಂ ವಿಜಯತೇ ಧ್ರುವಮ್ ||

ರಾಜಭಯಂ ನ ಭವೇತ್ ತಸ್ಯ ನ ದಾರಿದ್ರ್ಯಂ ಕದಾಚನ |

ಸರ್ವಪಾಪ ವಿನಿರ್ಮುಕ್ತಃ ಸ ಯಾತಿ ಪರಮಾಂ ಗತಿಮ್ |

ಶ್ರೀ ಪರಶುರಾಮ ಪ್ರಸಾದೇನೇತಿ ಶ್ರುತಿಃ ||


ಇತಿ ಶ್ರೀ ಪರಶುರಾಮ ಸ್ತೋತ್ರಂ ಸಂಪೂರ್ಣಂ |

Thursday, October 2, 2025

ಕನ್ನಡ ಹೃದಯಗೀತೆ


(Raga: Shankarabharanam | Tala: Adi)

(Pallavi)

ಶಾರದಾರವಿಂದ ವನ ವಿಹಾರಿಣಿ
ಕರ್ನಾಟಕ ದೇವಿ ಭವತಾರಿಣಿ
ಭಕ್ತಜನ ಮನೋಭೀಷ್ಟ ಫಲದಾಯಿನಿ
ಜಯ ಜಯ ಹೇ ಮಾತಾ, ಜಯ ಜಯ ಹೇ ಧಾತ್ರಿ

(Anupallavi)

ಹೊಯ್ಸಳ ಶಿಲ್ಪ ಲಲಿತೇ, ವಿಜಯನಗರ ಗರ್ಜಿತೇ
ಬಾದಾಮಿ ಪಟ್ಟಡಕಲ್ ಶಾಸನ ನಿಜ ವಾಣಿ
ಶ್ರುತಿ ಸ್ಮೃತಿ ಪುರಾಣ ಸಂಗೀತ ಕಲಾ ನಿಧಾನಿ
ಜಯ ಜಯ ಹೇ ಮಾತಾ, ಜಯ ಜಯ ಹೇ ಧಾತ್ರಿ

(Charanam 1)

ಕವಿ ಪಂಪನು ತಂದ ಕಾವ್ಯಾಮೃತ, ರನ್ನನ ಘನ ಶಬ್ದ ಚಿತ್ರ
ಕುಮಾರವ್ಯಾಸನು ಕಂಡ ಭಾರತ, ಹರಿದಾಸರ ಹೃದಯದ ಗೀತ
ಸರ್ವಜ್ಞನ ವಚನದ ವೇದ, ಅಕ್ಕಮಹಾದೇವಿಯ ತ್ಯಾಗದ ನಾದ
ಏಕಾಂತ ರಾಮಯ್ಯನ ವಿರಕ್ತಿ, ಕನಕದಾಸರ ಸಾಮ್ಯದ ಭಕ್ತಿ
ಇಂತಹ ಮುಕ್ತಿ ಮಾರ್ಗದ ತಾರಿಣಿ...
ಶಾರದಾರವಿಂದ ವನ ವಿಹಾರಿಣಿ...

(Charanam 2)

ತುಂಗಾ ಭದ್ರಾ ಕಾವೇರಿ ಜಲಧಾರಾ, ಮಲೆನಾಡು ಗಿರಿ ವನ ಚಾರಾ
ಕೊಡಗು ಹಸ್ತಿವನದೇಶ, ಕರಾವಳಿ ಸಾಗರ ಲಹರಿ ವಿಲಾಸ
ಗೋಕರ್ಣ ಕ್ಷೇತ್ರದ ಪಾವನಿ, ಶ್ರವಣಬೆಳಗೊಳದ ಜಿನ ಧರ್ಮ ಜ್ಯೋತಿ
ಶ್ರೀ ಕ್ಷೇತ್ರ ಉಡುಪಿಯ ಮಧ್ವಾಚಾರ್ಯ ಸಿದ್ಧಾಂತ
ಈ ಪುಣ್ಯ ಭೂಮಿಯೇ ನೀನೆ ಸಾಕ್ಷಾತ್...
ಕರ್ನಾಟಕ ದೇವಿ ಭವತಾರಿಣಿ...

(Charanam 3)

ವಿದ್ಯಾರಣ್ಯ ಮುನಿ ಜ್ಞಾನ ದೀಪ, ಬಸವಣ್ಣನ ಕಾಯಕದ ಅನುಪ್ರಾಸ
ಬೆಂಗಳೂರು ನಗರಿಯ ವಿಜ್ಞಾನ ತಪಸ್ಸು, ಮಂಡ್ಯ ಮೈಸೂರು ಜಾನಪದ ಗರ್ವ
ತುಳು ಕೊಂಕಣಿ ಕೊಡವ ನುಡಿಯಲಿ, ಒಂದೇ ಕುಟುಂಬದ ಸಂಗಮ ಸುಖ
ನಿನ್ನ ಪಾದ ಸೇವೆಯೇ ನಮ್ಮ ಮುಕುಂದ...
ಭಕ್ತಜನ ಮನೋಭೀಷ್ಟ ಫಲದಾಯಿನಿ...
ಜಯ ಜಯ ಹೇ ಮಾತಾ, ಜಯ ಜಯ ಹೇ ಧಾತ್ರಿ

ಶ್ರೀ ಕನ್ನಡಮಾತೆ ಭುವನೇಶ್ವರಿ ಸ್ತೋತ್ರ



ಭವಾನೀ ಭುವನೇಶ್ವರಿ ಭುವನಾಧಾರಾ,

ಕಾವೇರಿ ತೀರಸುಂದರಿ ಪರಮೇಶ್ವರಿ ।

ಕರ್ನಾಟಕ ಮಾತೆ, ದಿವ್ಯಾ ವಿದ್ಯಾನಿಧಿ,

ನಮನಾರ್ಹಾ ನಿತ್ಯೇ ನಮಾಮಿ ಭುವನೇಶ್ವರಿ ॥ 1 ॥

ನೀಲಮಣಿವಿಲಾಸಿತ ತಾಜಸವಾ,

ಚಂದ್ರಕಲಾಸ್ಮಿತಿಮದನಮುಖವಾ ।

ಭಕ್ತಜನಪರಿಪಾಲಿನೀ ಪ್ರಿಯಾ,

ಕಲ್ಯಾಣಮಯಿ ಕರುಣಾಸಾಗರಾ ॥ 2 ॥

ಜ್ಞಾನಮಯೀ ಜಯಕರೂಪಾ ಕಲ್ಪವೃಕ್ಷಾ,

ಶಕ್ತಿ ಪರಮೇಶ್ವರೀ ಚಿರಂತನಾ ।

ತಾಯಿತಾಯಿ ಕರ್ನಾಟಕ ನಾಡಿನ,

ಭುವನೇಶ್ವರಿ ಗೌರಿ ನಮೋ ನಮಃ ॥ 3 ॥

ಶಿವಸಹಜ ಶಕ್ತಿಧಾರಿಣಿ ಸದಾ,

ಧರ್ಮಪರಾಯಣೀ ಪರಮಾರ್ಥಮಮ ।

ಭಕ್ತರಕ್ಷಕಾ ಭುವನೇಶ್ವರಿ ದೇವಿ,

ಜಯಮಾಲೆಯ ತಾರೆ ಸದಾ ಭಕ್ತಮನಃ ॥ 4 ॥


ಶ್ರೀ ಸುರೇಂದ್ರ ಸಂಕಲಿತಂ ಸ್ತೋತ್ರಮಿದಂ ಭುವನೇಶ್ವರ್ಯೈ,

ಯಃ ಪಠೇತ್ ಭಕ್ತ್ಯಾ ವಿನಯಾ ಸಂಯುಕ್ತಂ ಭಜತಾಂಕರೋತ್ಕಟಂ ।

ದುಃಖನಿವಾರದಂ ಕೃಪಾಸಾಗರಂ ಪಾಪದೂರಣಕಾರಿಣೀಂ,

ಕನ್ನಡಾಂಬೆ ಪರಮೇಶ್ವರಿ ಶರಣ್ಯಾ ಯಜ್ಞಫಲದಾತ್ರೀಂ ॥

ಜಗತ್ ಕಲ್ಯಾಣಮಯೀ ದೇವೀ ಭಕ್ತವತ್ಸಲಾ ಚ ಮಹತಾ,

ನಮಾಮಿ ನಿತ್ಯಂ ಭುವನೇಶ್ವರಿ ತಾಯಿತಾಯಿ ಕರುಣಾಕರಿ॥

Sunday, September 21, 2025

ಶ್ರೀಕಾಲಭೈರವಸ್ತುತಿಃ

 



ಧ್ಯಾನಮ್

ದಿಗಂಬರಂ ಶೂಲಕಪಾಲಹಸ್ತಂ,

ಜಟಾಜೂಟಜ್ವಾಲಾಮಾಲಿನಂ ಪ್ರಭುಮ್ ।

ನೀಲಕಂಠಂ ಲೋಕಪಾಲಂ ವರದಂ,

ಧ್ಯಾಯೇ ಭೈರವಂ ಕಾಲವಶ್ಯಕಾರಿಣಮ್ ॥

ಕಾಸೀವಾಸಿನಂ ಭಯನಾಶಕಂ ಹರಮ್,

ಭಕ್ತಾನುಕಂಪಿನಂ ಉಗ್ರತೇಜೋಮಯಮ್ ।

ಪ್ರಪಂಚನಾಶಕಂ ಪರಮಾಧಿದೇವಂ,

ವಂದೇ ಸದಾ ಕಾಲಭೈರವಂ ಶಾಂತಮೂರ್ತಿಮ್ ॥


ಸ್ತೋತ್ರಂ 

ಓಂ ಭಂ ಕಾಲಭೈರವಂ ವಂದೇ, ಕಾಶೀ ಕ್ಷೇತ್ರಪಾಲಕಮ್ ।

ಸರ್ವರೋಗವಿನಾಶಾರ್ಥಂ ಭಕ್ತಾನಾಂ ಸುಖದಾಯಕಮ್ ॥ 1 ॥

ಓಂ ಭಂ ಉಗ್ರತೇಜಸ್ಸಂಪನ್ನಂ ಭೀಷಣಂ ಭಕ್ತಪೋಷಕಮ್,

ಶ್ಮಶಾನವಾಸಿನಂ ಧೀರಂ ದಿಗ್ವಿಜಯೀಶ್ವರಂ ಹರಿಮ್ ॥ 2 ॥

ಓಂ ಭಂ ಶೂಲಖಡ್ಗಗದಾಧಾರಂ ಕುಕ್ಕುರವಾಹನಂ ಗುರೂम्,

ಮೋಕ್ಷದಂ ಭೋಗದಂ ನಿತ್ಯಂ ಭೈರವಂ ಭಕ್ತವತ್ಸಲಮ್ ॥ 3 ॥

ಓಂ ಭಂ ತ್ರಿಪುರಾಂತಕಂ ದೇವಂ ಪಾಪತಾರಣ ಪಾರಗಮ್,

ಅಘೋರರೂಪಧರಂ ನಿತ್ಯಂ ಶರಣಾಗತಪೋಷಕಮ್ ॥ 4 ॥

ಓಂ ಭಂ ದಂಡಪಾಣಿ ದುಷ್ಟಸಂಘವಿಧ್ವಂಸಕಂ ಹರಿ,

ಅನ್ನಪೂರ್ಣಾಪ್ರಿಯಂ ದೇವಂ ಲೋಕನಾಥಂ ನಮಾಮ್ಯಹಮ್ ॥ 5 ॥


ಫಲಶ್ರುತಿ 

ಯಃ ಪಠೇದಿದಂ ಭೈರವರಾಜಸ್ತುತಿಮನ್ವಹಮ್,

ಸರ್ವಪಾಪವಿನಾಶಃ ಸ್ಯಾತ್ ಸರ್ವಕರ್ಮಸು ಸಿದ್ಧಿದಃ ।

ಕಾಶೀ ಕ್ಷೇತ್ರಪತೇರ್ಭೈರವಾನುಗ್ರಹಮವಾಪ್ಯ ಸಃ,

ಧನಂ ಧಾನ್ಯಂ ಸ್ತ್ರೀಯಂ ಪುತ್ರಂ ವಿಜಯಂ ಚ ನ ಲಭ್ಯತೆ ॥

ಅಂತಕಾಲಮಪಿ ಪ್ರಾಪ್ಯ ಮಹಾನಂದಪದಂ ಲಭೇತ್,

ಭಕ್ತೈಕವಶ್ಯಂ ಭೈರವಂ ಪ್ರೀತಿಂ ಕರೋತಿ ಮಾಮಕಮ್ ॥

॥ ಇತಿ ಶ್ರೀಸುರೇಂದ್ರವಿರಚಿತಾಂ ಶ್ರೀಕಾಲಭೈರವಸ್ತುತಿಃ ಸಂಪೂರ್ಣಾ ॥

Saturday, September 20, 2025

ಶ್ರೀನರಸಿಂಹಸ್ತುತಿಃ

ಧ್ಯಾನಮ್
ಉದ್ಯದ್ಭಾನು ಸಹಸ್ರಕೋಟಿ ಸಮಭಾಸುರಮೂರ್ತಿಮ್,
ಉಗ್ರದಂತ ನಖಶೂಲವಿರಾಜಿತಪಾಣಿಮ್ ।
ಭಕ್ತಾರ್ತಿಹರಣಂ ಭವಭಯವಿನಾಶಂ,
ನರಸಿಂಹಮಹಂ ಧ್ಯಾಯೇ ಲಕ್ಷ್ಮೀಸಮನ್ವಿತಂ ॥

ಸಿಂಹನಾದೋನ್ನತಗಾತ್ರಂ ಜ್ವಾಲಾಮಾಲಿನಿ ಭೀಷಣಮ್,
ಆಲಿಂಗಿತವತೀ ಲಕ್ಷ್ಮೀಂ ವಾಮಭಾಗಮನೋಹರಮ್ ।
ದೈತ್ಯಭೀಕರಸಂಘಚೇದಿತಂ ಪರಮೇಶ್ವರಮ್,
ಧ್ಯಾಯೇ ನಿತ್ಯಂ ಭಕ್ತಜನವತ್ಸಲಂ ನರಸಿಂಹಂ ॥

ಸ್ತೋತ್ರಂ
ಜಯ ಲಕ್ಷ್ಮೀನರಸಿಂಹ ಪರಮಾತ್ಮನಾರಾಯಣ,
ಸ್ಥಂಭೋದ್ಭೂತ ಪ್ರಭೋ ದೇವ ದೈತ್ಯದರ್ಪವಿಭೇದನ ॥ 1 ॥

ಹಿರಣ್ಯಕಶಿಪೋರ್ವೈರಿನಾಶಕ ತೇಜೋರಾಶೇ,
ಪ್ರಹ್ಲಾದಪಾರಿಜಾತ ಕರುಣಾಸಮುದ್ರವಿಹಾರಿನೇ ॥ 2 ॥

ವಜ್ರದಂಷ್ಟ್ರ ವಜ್ರನಖ, ಉಗ್ರಜ್ವಾಲಾಸಮೋದ್ಯತ,
ಸರ್ವಪಾಪವಿನಾಶಕ ಸರ್ವಭಕ್ತ ಅಭಯಪ್ರದ ॥ 3 ॥

ಚಕ್ರಶಂಖಗದಾಪಾಣೇ ಸಿಂಹರೂಪ ಪರಾತ್ಪರ,
ವೇದವೇದಾಂತವೇದ್ಯಾಯ ವಿಷ್ಣೋ ನಮೋ ನಮೋಸ್ತು ತೇ ॥ 4 ॥

ಶರಣಾಗತ ವತ್ಸಲ ಭಕ್ತಪರಿಪಾಲಕ,
ಅನಂತಕೀರ್ತಿದುಗ್ಗತಿಹಾರಕ ನರಸಿಂಹ ॥ 5 ॥

ಫಲಶ್ರುತಿ
ಯಃ ಶ್ರದ್ಧಯಾ ಪಠೇದ್ನಿತ್ಯಂ ನರಸಿಂಹಸ್ತುತಿಂ ಶ್ರಿಯಂ,
ತಸ್ಯ ದುಃಖವಿನಾಶಃ ಸ್ಯಾತ್, ಸರ್ವಸಂಪತ್ತಿರಾಪ್ಯತೇ ॥

ಋಣಪಾಶವಿಮುಕ್ತೋ ಭವೇವಿಪತ್ತಿಭಯಾಪಹಃ,
ಜರಾಮರಣನಾಶಶ್ಚ ಸತ್ಯಂ ಮೇ ವಚನಂ ಹರಿḥ ॥

ಪ್ರೀಣತಿ ಲಕ್ಷ್ಮೀನರಸಿಂಹಃ ಸರ್ವಕಾಮಪ್ರದಾಯಕಃ,
ಭಕ್ತವತ್ಸಲ ದೇವೇಶಃ ಮೋಕ್ಷಮಾರ್ಗಪ್ರದಶ್ಚ ಸದಾ ॥

॥ ಇತಿ ಶ್ರೀಸುರೇಂದ್ರವಿರಚಿತಾಂ ಶ್ರೀನರಸಿಂಹಸ್ತುತಿಃ ಸಂಪೂರ್ಣಾ ॥

ಶ್ರೀಲಲಿತಾ ಸ್ತುತಿಃ

ಧ್ಯಾನಮ್ 
ಅಲೌಕಿಕ ಚಾರು ವಿಲಾಸರೂಪಿಣೀಂ
ಅನಂತಕೋಟಿ ಬ್ರಹ್ಮಾಂಡಧಾರಿಣೀಮ್ ।
ಸಿಂಹಾಸನಾಸೀನಮಣೀಶ್ವರೀಂ ಶ್ರಿಯಂ,
ಲಲಿತಾಂಬಿಕಾಂ ಶರಣಂ ಪ್ರಪದ್ಯೇ ॥

ಅರುಣಕಿರಣಜಾಲ ಜ್ವಾಲಾಸ್ಮಿತಾನುಜ್ವಲವದನಾಮ್,
ರತ್ನಮಕುಟಮಂಡಿತ ಚಿಬುಕಪರ್ಣಿಮಣಿಗೃಹೀತಾಂ,
ಪ್ರೇಮಕೃಪಾಸಿಂಧುಂ ಪಶ್ಯೇ ಭವಾನೀಂ –
ಹೃದಿ ಸದಾ ಲಲಿತಾಮಹೇಶೀನಾಂ ಧ್ಯಾಯೇತ್ ॥

ಸ್ತೋತ್ರಂ
ಲಲಿತೇ ಪರಮೇಶಾನಿ, ಶಕ್ತಿಬೀಜಪ್ರದಾಯಿನಿ ।
ಅನಂತಕೋಟಿಹೃದಯವಾಸಿನಿ, ಮಾಮವ ಪಾರುಣ್ಯರೂಪಿಣಿ ॥ 1 ॥

ಕಾಮೇಶ್ವರಾಂಕೆ ಕುಳಿತು, ಕರುಣಾಘಟಿತಾಂಬುಧಿಹಾರಿṇಿ ।
ಭಕ್ತವಶ್ಯೇ, ಸುಮಧುರಲೇಖೇ, ಜಗದ್ರಕ್ಷಾ ಮಹೇಶ್ವರಿ ॥ 2 ॥

ರಕ್ತಾಂಬರಪುಷ್ಪಾಭರಿತೋತ್ಪಲವಿಲಾಸಿನಿ,
ಸುಗಂಧಿಭೂಷಣಮಾಡಿದ ಸುಶೋಭಿತಾಂಗವೈಭವಿ ।
ಅಖಂಡಮಂಗಳರೂಪಿಣೀ, ಅಖಿಲತಾರಕಪೋಷಿಣೀ ॥ 3 ॥

ಭಂಡಾರ್ಯನಿಗ್ರಹಕಾರಿಣಿ, ಶಕ್ತಿಸೇನಾಸಮನುತಲೇ ॥
ವಿಜಯಲಲಿತೆಯೇ, ಜಗದ್ವಿಜಯಿನೀ, ಕರುಣೆಯಮೃತಪೂರ್ಣಭಾಂಡಿನೀ ॥ 4 ॥

ಕಾಮಧೇನುಕಲ್ಪಲತಿಕೇ, ಭಕ್ತಾಂಗಣದಲ್ಲಿ ನೆಲೆಸುವೆ ।
ಹೃದಯಪುಷ್ಕರವಾಸಿನಿ, ಲಲಿತಾಂಬ ಸುಖಪ್ರದಾ ॥ 5 ॥

ಫಲಶ್ರುತಿ
ಯಃ ಶ್ರದ್ಧಯಾ ಲಲಿತಾಂಬಿಕೆ ಸ್ತುತಿಂ ಪಠತಿ ಭಕ್ತಿಭಾವತಃ ।
ತಸ್ಯ ಕುಲತ್ರಯಂ ಪಾವನಂ ಭವೇತ್, ಕೃಪಾಸಂಯುತಮಮೃತಂ ಲಭೇತ್ ॥

ಅನಂತರೋಗವಿನಾಶಕೃದ್ದೇವಿ ಲಲಿತೇ,
ಸರ್ವಸಂಪತ್ತಿದಾತ್ರೀ ಭವ,
ಜಗನ್ನಾಯಿಕೇ ಪರಮಕರೂಣೆ ।

ಅವಿರತಕೀರ್ತನೆನ ಶುದ್ಧಿಮಾಪ್ನೋತಿ ಮಾನವಃ,
ಶ್ರೀವಿದ್ಯಾಃ ಅನುಗ್ರಹಂ ಲಭೇತ್, ಶಾಶ್ವತಪದಂ ಗಚ್ಛತಿ ॥

॥ ಇತಿ ಶ್ರೀಸುರೇಂದ್ರವಿರಚಿತಾಂ ಶ್ರೀಲಲಿತಾ ಸ್ತುತಿಃ ಸಂಪೂರ್ಣಾ ॥

ಶ್ರೀ ದುರ್ಗಾಸ್ತುತಿಃ


ಧ್ಯಾನಂ

ಸಿಂಹಸ್ಕಂಧಾರೂಢಾಂ, ಶಶಿಧರಕಿರೀಟಾಂ ತ್ರಿನಯನಾಮ್ ।
ಖಡ್ಗಚಕ್ರಾಶೂಲಾಂ,ವರಭಯದಾಯಿನೀಂ ಕರಯುಗೇ ॥
ದೈತ್ಯೇಂದ್ರರಕ್ತಾಭಿಷಿಕ್ತಾಂ,ನವಯುವತಿವಿಲಾಸಸ್ಮಿತಮುಖೀಮ್ ।
ಧ್ಯಾಯೇದ್ದುರ್ಗಾಂಜಗದ್ಧಾತ್ರೀಂ, ಶರಣಮುಪಗತಾನಾಂ ಭಯಹರೀಮ್ ॥

ಸ್ತೋತ್ರಂ

ಓಂ ನಮೋ ಜಗನ್ನಿವಾಸಿನ್ಯೈ, ನಮೋ ಜಗತ್ಪ್ರತಿಷ್ಠಯೇ ।
ನಮೋಜನನಿ ದುರ್ಗೇಶಿ, ಮಹಿಷಾಸುರಮರ್ದಿನಿ ॥ ೧ ॥

ಶರಣಾಗತವತ್ಸಲೇ ತುಭ್ಯಂ, ತ್ರೈಲೋಕ್ಯರಕ್ಷಣತತ್ಪರೇ ।
ಅಭಯಂದೇಹಿ ಮೇ ದೇವಿ, ಸರ್ವಶತ್ರುಭಯಾಪಹೇ ॥ ೨ ॥

ಶಿರಃ ಪಾತು ಮಹಾಲಕ್ಷ್ಮೀಃ, ಲಲಾಟಂ ಪಾತು ಚಂಡಿಕಾ ।
ನೇತ್ರೇಪಾತು ಜಗನ್ಮಾತಾ, ಶ್ರುತೀ ಪಾತು ಸರಸ್ವತೀ ॥ ೩ ॥

ವಾಚಂ ಪಾತು ಕುಮಾರೀ ಚ, ಹೃದಯಂ ಪಾತು ವೈಷ್ಣವೀ ।
ನಾಭಿಂಪಾತು ಮಹಾಕಾಳೀ, ಪಾದೌ ಪಾತು ತಥೇಶ್ವರೀ ॥ ೪ ॥

ಸರ್ವಾಂಗಂ ಪಾತು ಮಾಂ ದೇವೀ, ಸರ್ವಾವಸ್ಥಾಸು ಸರ್ವದಾ ।
ದುರ್ಗಮೇಷುಚ ಸಂಸಾರೇ, ದುರ್ಗಾ ರಕ್ಷತು ಸರ್ವತಃ ॥ ೫ ॥

ಭುಕ್ತಿಂ ಚ ಮುಕ್ತಿಂ ಚೈವ, ಐಶ್ವರ್ಯಂ ಸಂತತಿಂ ಶ್ರಿಯಮ್ ।
ದೇಹಿಮೇ ಕರುಣಾಸಿಂಧೋ, ತ್ವಮೇಕಾ ಶರಣಂ ಮಮ ॥ ೬ ॥

ಯುದ್ಧೇ ಜಯಂ, ಸಂಕಟೇ ಶಾಂತಿಂ, ವಿದ್ಯಾಯಾಂ ಪ್ರಜ್ಞಾಂ, ಗೃಹೇ ಶ್ರಿಯಮ್ ।
ದುರ್ಗತೇರ್ದುರ್ಗಮುತ್ಕೃಷ್ಟಾಂ,ಗತಿಂ ದೇಹಿ ನಮೋಸ್ತು ತೇ ॥ ೭ ॥

ಜಯ ಜಯ ಹೇ ಮಹಿಷಾಸುರಘ್ನಿ, ಜಯ ಜಯ ಶುಂಭನಿಶುಂಭಹಂತ್ರಿ ।
ಜಯ ಜಯ ಚಂಡಮುಂಡಮಥಿನಿ,ಜಯ ಜಯ ಲೋಕಹಿತೇ ಕೃಪಾಳೋ ॥ ೮ ॥

ಫಲಶ್ರುತಿಃ

ಇತಿ ಶ್ರೀಸುರೇಂದ್ರವಿರಚಿತಾಂ ಶ್ರೀದುರ್ಗಾಸ್ತುತಿಂ ಯಃ ಪಠೇದ್ಭಕ್ತ್ಯಾ ನಿತ್ಯಂ ನವರಾತ್ರೇಷು ವಾ ।
ತಸ್ಯ ದುರ್ಗಾಪ್ರಸಾದೇನ ನಶ್ಯಂತಿಸರ್ವೋಪದ್ರವಾಃ, ಜಯೋ ವಿದ್ಯಾ ಧನಂ ಪುತ್ರಾಃ ಸರ್ವೇ ಸಿದ್ಧ್ಯಂತಿ ನಿಶ್ಚಿತಮ್ ॥

ಓಂ ಜಯಂತೀ ಮಂಗಳಾ ಕಾಳೀ ಭದ್ರಕಾಳೀ ಕಪಾಲಿನೀ ।
ದುರ್ಗಾಕ್ಷಮಾ ಶಿವಾ ಧಾತ್ರೀ ಸ್ವಾಹಾ ಸ್ವಧಾ ನಮೋಸ್ತು ತೇ ॥
ಓಂಶಾಂತಿಃ ಶಾಂತಿಃ ಶಾಂತಿಃ ॥

ಶ್ರೀ ಶಿವಸ್ತುತಿಃ

ಧ್ಯಾನಂ 

ಚಂದ್ರಾರ್ಧಚೂಡಂ ಸ್ಮಿತವಕ್ತ್ರನೇತ್ರಂ, ವ್ಯಾಘ್ರಾಜಿನೋತ್ತರೀಯಂ ಫಣೀಂದ್ರೈಃ ।
ಹಸ್ತಾಬ್ಜಯುಗ್ಮೇಡಮರುತ್ರಿಶೂಲಂ, ಧ್ಯಾಯೇಚ್ಛಿವಂ ಶಾಂತಿಮಯಂ ನಿರೀಹಮ್ ॥
ಭಸ್ಮಾಂಗರಾಗಂಜಟಿಲಂ ತ್ರಿನೇತ್ರಂ, ಸರ್ವಾರ್ತಿಹಂತಾರಮನನ್ಯಭಾವ್ಯಮ್ ।
ಯಸ್ಯ ಸ್ಮರಣ್ಮಾತ್ರತಃಸರ್ವಸಿದ್ಧಿಃ, ಸಾ ಮೇ ಭವೇಚ್ಛಂಕರಸ್ಯ ಪ್ರಸಾದಾತ್ ॥

ಸ್ತೋತ್ರಂ 

ಓಂ ನಮಃ ಶಿವಾಯ ಶಾಂತಾಯ, ನಿರ್ಗುಣಾಯ ಗುಣಾತ್ಮನೇ ।
ನಮೋವಿಶ್ವಸ್ವರೂಪಾಯ, ನಿತ್ಯಾನಂದಾಯ ತೇ ನಮಃ ॥ ೧ ॥

ಸರ್ವಜ್ಞಾಯ ಸರ್ವದಾತ್ರೇ, ಸರ್ವೇಶಾಯ ನಮೋ ನಮಃ ।
ಸರ್ವಾಂತರ್ಯಾಮಿಣೇತುಭ್ಯಂ, ಸರ್ವಮಂಗಳಮಂಗಳಾಯ ॥ ೨ ॥

ಶಿರಃ ಪಾತು ಮಹಾದೇವಃ, ಲಲಾಟಂ ಪಾತು ಶಂಕರಃ ।
ನೇತ್ರೇಪಾತು ಪಿನಾಕೀ ಚ, ಶ್ರುತೀ ಪಾತು ಮಹೇಶ್ವರಃ ॥ ೩ ॥

ಘ್ರಾಣಂ ಪಾತು ಸದಾಶಿವಃ, ಮುಖಂ ಪಾತು ಉಮಾಪತಿಃ ।
ಕಂಠಂಪಾತು ನಿಲೀಯಂತೇ, ಸರ್ವದೇವಾಃ ಸದಾ ಯಸ್ಮಿನ್ ॥ ೪ ॥

ಹೃದಯಂ ಪಾತು ಭೂತೇಶಃ, ಭುಜೌ ಪಾತು ಗಿರೀಶ್ವರಃ ।
ಕರೌಪಾತು ಶಿತಿಕಂಠಃ, ಉದರಂ ಪಾತು ಖಂಡಪರಶುಃ ॥ ೫ ॥

ಕಟಿಂ ಪಾತು ಸುರೇಶಾನಃ, ಪಾದೌ ಪಾತು ಜಗತ್ಪತಿಃ ।
ಸರ್ವಾಂಗಂಪಾತು ಮಾಂ ದೇವೋ, ರುದ್ರೋ ರಕ್ಷತು ಸರ್ವದಾ ॥ ೬ ॥

ಅಜ್ಞಾನಂ ಚೈವ ಪಾಪಂ ಚ, ಮೋಹಂ ದುಃಖಂ ಚ ಸಂಸೃತಿಮ್ ।
ನಾಶಯ ತ್ವಂಕೃಪಾಸಿಂಧೋ, ದೇಹಿ ಜ್ಞಾನಂ ಚ ಮುಕ್ತಿತಃ ॥ ೭ ॥

ಭುಕ್ತಿಂ ಮುಕ್ತಿಂ ಪ್ರದಾತಾರಂ, ಶರಣಂ ಪ್ರಪನ್ನೋಽಸ್ಮ್ಯಹಮ್ ।
ಶಿವ ಏವ ಕೃಪಾಂಕುರ್ವನ್, ಮಾಂ ಪಾಲಯ ಸದಾಶಿವ ॥ ೮ ॥

ಫಲಶ್ರುತಿಃ

ಇತಿ ಶ್ರೀಸುರೇಂದ್ರವಿರಚಿತಾಂ ಶ್ರೀಶಿವಸ್ತುತಿಂ ಯಃ ಪಠೇದ್ಭಕ್ತ್ಯಾ ನಿತ್ಯಂ ಶಿವಸನ್ನಿಧೌ ।
ತಸ್ಯ ಶಿವಪ್ರಸಾದೇನ ಸರ್ವಪಾಪೈಃಪ್ರಮುಚ್ಯತೇ, ಸರ್ವೈಶ್ವರ್ಯಂ ಚ ವಿಂದೇತ, ಅಂತೇ ಶಿವಪುರಂ ವ್ರಜೇತ್ ॥

ಓಂ ನಮಃ ಶಿವಾಯ ॥
ಓಂತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋ ರುದ್ರಃ ಪ್ರಚೋದಯಾತ್ ॥

Wednesday, September 17, 2025

ಶ್ರೀ ಗಾಯತ್ರೀಸ್ತುತಿಃ


ಧ್ಯಾನಂ

ಸುವರ್ಣಾಭಾಂ ಸುವರ್ಣಾಲಂಕೃತಾಂ, ಪದ್ಮಾಸನಸ್ಥಿತಾಮ್ । ಹಿರಣ್ಯವರ್ಣಾಂತ್ರಿನೇತ್ರಾಂ, ವೇದಮಾತಾರಮಂಬಿಕಾಮ್ ॥ ಹಸ್ತೈರ್ವರಾಭಯಮುದ್ರಾಂ,ಧ್ಯಾಯೇದ್ಗಾಯತ್ರೀಂ ಸರಸ್ವತೀಮ್ । ಯಸ್ಯಾಃಸ್ಮರಣಮಾತ್ರೇಣ, ಬ್ರಹ್ಮಜ್ಞಾನಂ ಪ್ರಜಾಯತೇ ॥

ಸ್ತೋತ್ರಂ

ಓಂ ನಮೋ ವೇದಮಾತ್ರೇ ಚ, ಸಾವಿತ್ರ್ಯೈ ಚ ನಮೋ ನಮಃ । ನಮೋಬ್ರಹ್ಮಸ್ವರೂಪಿಣ್ಯೈ, ಜ್ಞಾನವಿದ್ಯಾಪ್ರದಾಯಿನೇ ॥ ೧ ॥

ಓಂಭೂರ್ಭುವಃಸ್ವರೂಪಿಣ್ಯೈ, ತತ್ತ್ವಸಾಕ್ಷಾತ್ಕೃತಾತ್ಮನೇ । ಸರ್ವಮಂತ್ರಾತ್ಮಿಕೇದೇವಿ, ಗಾಯತ್ರ್ಯೈ ಚ ನಮೋ ನಮಃ ॥ ೨ ॥

ಪಂಚಪ್ರಾಣಸ್ವರೂಪಿಣ್ಯೈ, ಪಂಚಕೋಶವಿಭೇದಿನೇ । ತ್ರಿವರ್ಗಫಲದಾತ್ರ್ಯೈಚ, ತ್ರಯೀಮೂರ್ತ್ಯೈ ನಮೋ ನಮಃ ॥ ೩ ॥

ಶಿರಃ ಪಾತು ಚ ಸಾವಿತ್ರೀ, ಲಲಾಟಂ ಪಾತು ಗಾಯತ್ರೀ । ನೇತ್ರೇಪಾತು ಸರಸ್ವತೀ, ಶ್ರುತೀ ಪಾತು ಚ ವೇದಮಾತಾ ॥ ೪ ॥

ವಾಚಂ ಪಾತು ಚ ವಾಗ್ದೇವೀ, ಹೃದಯಂ ಪಾತು ಪಾರ್ವತೀ । ನಾಭಿಂಪಾತು ಸರಸ್ವತೀ, ಪಾದೌ ಪಾತು ಸದಾಶಿವೀ ॥ ೫ ॥

ಜ್ಞಾನಂ ಚೈವ ವಿಜ್ಞಾನಂ, ಧೈರ್ಯಂ ಶೌರ್ಯಂ ಯಶೋ ಬಲಮ್ । ದೇಹಿಮೇ ಕರುಣಾಸಿಂಧೋ, ಮೋಕ್ಷಂ ಚ ಪರಮಂ ಪದಮ್ ॥ ೬ ॥

ಅಜ್ಞಾನತಿಮಿರಾಂಧಸ್ಯ, ಜ್ಞಾನಾಂಜನಶಲಾಕಯಾ । ಚಕ್ಷುರುನ್ನೀಲಿತಂಯೇನ, ತಸ್ಮೈ ಶ್ರೀಗುರವೇ ನಮಃ ॥ ೭ ॥

ಗಾಯತ್ರೀ ಚೈವ ಸಾವಿತ್ರೀ, ಸರಸ್ವತ್ಯಥ ಪಾರ್ವತೀ । ವೇದಮಾತಾಜಗನ್ಮಾತಾ, ಮಾಂ ಪಾಲಯ ಸದಾಶಿವಿ ॥ ೮ ॥

ಫಲಶ್ರುತಿಃ 

ಇತಿ ಶ್ರೀಸುರೇಂದ್ರವಿರಚಿತಾಂ ಶ್ರೀಗಾಯತ್ರೀಸ್ತುತಿಂ ಯಃ ಪಠೇತ್ ಸಂಧ್ಯಾಕಾಲೇ ಭಕ್ತ್ಯಾ ಸಂಯುತಃ । ತಸ್ಯ ಗಾಯತ್ರೀಪ್ರಸಾದಾತ್ಸರ್ವವಿದ್ಯಾಃ ಪ್ರಕಾಶಂತೇ, ಬ್ರಹ್ಮಜ್ಞಾನಂ ಚ ಲಭ್ಯತೇ, ಸರ್ವೇ ಪಾಪೈಃ ಪ್ರಮುಚ್ಯತೇ ॥

ಓಂ ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್ ॥

ಶ್ರೀ ಗಣೇಶಸ್ತುತಿಃ

ಧ್ಯಾನಂ

ರಕ್ತಚಂದನಚರ್ಚಿತಂ, ಫಣಿಭೂಷಣಭೂಷಿತಮ್ । ಮೋದಕಸ್ಥಳಹಸ್ತಂಚ, ದಂತುರಂ ವಕ್ರತುಂಡಕಮ್ ॥ ಲಂಬೋದರಂಮಹಾಬುದ್ಧಿಂ, ಧ್ಯಾಯೇದ್ಗಣಪತಿಂ ಸದಾ । ಯಸ್ಯ ಸ್ಮರಣಮಾತ್ರೇಣ,ವಿಘ್ನಾಃ ಸರ್ವೇ ಪ್ರಣಶ್ಯತಿ ॥

ಸ್ತೋತ್ರಂ

ಓಂ ನಮೋ ವಿಘ್ನವಿನಾಶಾಯ, ಗಣಾನಾಂ ಪತಯೇ ನಮಃ । ನಮೋಬುದ್ಧಿಪ್ರದಾತ್ರೇ ಚ, ಶಿವಪುತ್ರಾಯ ತೇ ನಮಃ ॥ ೧ ॥

ಏಕದಂತಾಯ ವಕ್ರತುಂಡಾಯ, ಗಜವಕ್ತ್ರಾಯ ಧೀಮತೇ । ಲಂಬೋದರಾಯ ಸುಖಿನೇ,ಪ್ರಸನ್ನವದನಾಯ ಚ ॥ ೨ ॥

ಮೂಷಕಧ್ವಜ ಸಂಯುಕ್ತ, ಸಿದ್ಧಿಬುದ್ಧಿಪ್ರದಾಯಕ । ವಿಘ್ನೇಶ್ವರ ನಮಸ್ತುಭ್ಯಂ,ಸರ್ವಕಾರ್ಯಾರ್ಥಸಿದ್ಧಯೇ ॥ ೩ ॥

ಶಿರಃ ಪಾತು ಗಣೇಶ್ವರಃ, ಲಲಾಟಂ ಪಾತು ವಿಘ್ನಹಾ । ನೇತ್ರೇಪಾತು ವಿನಾಯಕಃ, ಶ್ರುತೀ ಪಾತು ಗಣಾಧಿಪಃ ॥ ೪ ॥

ಘ್ರಾಣಂ ಪಾತು ಗಜಾನನಃ, ಮುಖಂ ಪಾತು ಮಹೋದರಃ । ಕಂಠಂಪಾತು ಸುಮುಖಶ್ಚ, ಸ್ಕಂಧೌ ಪಾತು ಚ ಕುಂಜರಃ ॥ ೫ ॥

ಹೃದಯಂ ಪಾತು ಹೇರಂಬಃ, ಉದರಂ ಪಾತು ಲಂಬಕಃ । ನಾಭಿಂಪಾತು ಗಣನಾಥಃ, ಕಟಿಂ ಪಾತು ವರಪ್ರದಃ ॥ ೬ ॥

ಜಾನುನೀ ಪಾತು ಸಿದ್ಧಿಃ ಚ, ಪಾದೌ ಪಾತು ಸದಾಶಿವಃ । ಸರ್ವಾಂಗಂಪಾತು ಮಾಂ ದೇವೋ, ವಕ್ರತುಂಡೋ ಮಹಾಬಲಃ ॥ ೭ ॥

ಬುದ್ಧಿಂ ಚೈವ ಧನಂ ಧಾನ್ಯಂ, ಸಂತತಿಂ ವಿಜಯಂ ಕುಲಮ್ । ದೇಹಿಮೇ ಕರುಣಾಸಿಂಧೋ, ಮೋದಕಪ್ರಿಯ ಮಂಗಳಮ್ ॥ ೮ ॥

ಫಲಶ್ರುತಿಃ

ಇತಿ ಶ್ರೀಸುರೇಂದ್ರವಿರಚಿತಾಂ ಶ್ರೀಗಣೇಶಸ್ತುತಿಂ ಯಃ ಪಠೇತ್ ಪ್ರಾತರ್ಭಕ್ತ್ಯಾ ಸಂಯುತಃ । ತಸ್ಯ ಗಣೇಶಪ್ರಸಾದಾನ್ನಶ್ಯಂತಿಸರ್ವೇ ವಿಘ್ನಾಃ, ಪ್ರಜ್ಞಾ ಚ ವರ್ಧತೇ, ಧನಧಾನ್ಯಸಮೃದ್ಧಿಃ ಚ ಜಾಯತೇ ॥

ಓಂ ಗಂ ಗಣಪತಯೇ ನಮಃ । ಓಂಶ್ರೀ ಗಣೇಶಾಯ ನಮಃ ॥

ಆ ನೆನಪಿದೆ...!

ನಿನ್ನ ಮರೇವೇನೆಂದು ಟೊಂಕ ಕಟ್ಟಿ
ನಾ ನಿನ್ನ ನೆನಪನೆಲ್ಲ ಬುತ್ತಿ ಕಟ್ಟಿ
ನನ್ನ ಮನದ ಹಿತ್ತಲಿನಲ್ಲಿ
ಗುಂಡಿತೋಡಿ ಕತ್ತಲಿನಲ್ಲಿ 
ಬಚ್ಚಿ ಇರಿಸಿ, ಮುಚ್ಚಿಬಿಟ್ಟೆ ನೋವಿನಲ್ಲಿ

ಈ ಬರಡು ಹೃದಯದಲ್ಲಿ
ಕಣ್ಣೀರಿಗೆ ಬೆಳೆಯದು ಹಸಿರಿಲ್ಲಿ
ಸ್ವಲ್ಪ ಕೇಳಿ ಎಂದು ಹೇಳಿ 
ಎದ್ದು ನೆಡೆದೆ ಅನಂತದಲ್ಲಿ

ನಿನ್ನ ಸ್ಮೃತಿಯೆ ಸಂಸ್ಕೃತಿ ನನಗೆ
ನೆನಪಿನ ಬುತ್ತಿಯೆ ಬಿತ್ತಿದ ಹಾಗೆ
ಏಕಾಂತ ಏರೆಹುಳುವಾಗಿ, ನೋವೇ ನೀರಾಗಿ
ಬಂಜರಲಿ ಮೌನ ಮಳೆಯಾಗಿ
ಕಾಲ ಕಳೆದು, ಬಳ್ಳಿಯೋಡೆದು
ಹೆಮ್ಮರವಾಗಿದೆ, ಆಕಾಶ ಮುಟ್ಟಿದೆ
ಆ ನೆನಪಿದೆ... ನಿನ್ನದೆ...!

- ಹಂsa 

Tuesday, September 16, 2025

ಶ್ರೀ ಸೂರ್ಯಸ್ತುತಿಃ

ಧ್ಯಾನಂ

ಜ್ವಲಜ್ಜ್ವಾಲಾಮಯ ಚಕ್ರಂ, ವಿಶ್ವಸ್ಯ ಹೃದಯೇ ಸ್ಥಿತಮ್ । ನಾಡೀಸಿಂಧುಪ್ರವಾಹೇಶಂ,ಪ್ರಾಣಪ್ರದೀಪಮವ್ಯಯಮ್ ॥ ಸವಿತಾರಂಸಮಧ್ಯಾಯೇತ್, ಸಚರಾಚರವಿಗ್ರಹಮ್ । ಯಸ್ಯಾಂಶುಸ್ಪರ್ಶಮಾತ್ರೇಣ,ನಶ್ಯೇದ್ಘೋರಾಂಧಕಾರತಾ ॥

ಸ್ತೋತ್ರಂ

ಓಂ ನಮಃ ಸಹಸ್ರಕಿರಣಾಯ, ಜಗತಾಂ ಪತಯೇ ನಮಃ । ನಮೋಭಾಸ್ಕರರೂಪಾಯ, ಆದಿದೇವಾಯ ತೇ ನಮಃ ॥ ೧ ॥

ಪ್ರಚಂಡದ್ಯುತಿಮಿತ್ರಾಯ, ಕಶ್ಯಪಾತ್ಮಜಸೂರ್ಯತೇ । ತ್ರೈಲೋಕ್ಯಚಕ್ಷುಷೇತುಭ್ಯಂ, ನಮಸ್ತೇ ಜ್ಞಾನರೂಪಿಣೇ ॥ ೨ ॥

ಲೋಹಿತಾಯ ರಥಾರೂಢ, ಬ್ರಹ್ಮವಿಷ್ಣುಶಿವಾತ್ಮನೇ । ಮಹಾಪಾಪಹರಂದೇವ, ಮಾರ್ತಂಡಾಯ ನಮೋ ನಮಃ ॥ ೩ ॥

ಘೃಣಿಃ ಶಿರಸಿ ಪಾತು ಮೇ, ಭಾನುರ್ಲಲಾಟದೇಶಕೇ । ಆದಿತ್ಯೋನೇತ್ರಯೋರ್ಪಾತು, ದಿವಾಕರಃ ಶ್ರುತೀಷು ಚ ॥ ೪ ॥

ಭುಜೌ ಮೇ ಪಾತು ಭಾಸ್ಕರಃ, ಕರಾವಬ್ಜಕರೋವತು । ಹೃದಯಂಪಾತು ನಭೋಮಣಿಃ, ಸರ್ವಾಂಗಂ ಮಿತ್ರ ಏವ ಚ ॥ ೫ ॥

ಗ್ರಹಪೀಡಾಂ ನಿವಾರಯ, ದಾರಿದ್ರ್ಯಂ ದುಃಖಮೇವ ಚ । ರೋಗಶೋಕವಿನಾಶಾಯ,ಪ್ರಸೀದ ಮಘವನ್ನಮಃ ॥ ೬ ॥

ರಣೇ ರಾಜಭಯೇ ಘೋರೇ, ಸರ್ವೋಪದ್ರವಸಂಕಟೇ । ಸಂಗ್ರಾಮೇವಿಜಯಂ ದೇಹಿ, ತ್ವಮೇವ ಶರಣಂ ಮಮ ॥ ೭ ॥

ಜ್ಞಾನವಿಜ್ಞಾನಮೋಕ್ಷಾಣಾಂ, ದಾತಾರಂ ಚಂದ್ರಭಾಸ್ಕರಮ್ । ವಂದೇಽಹಂ ತ್ವಾಮಹಂ ನಿತ್ಯಂ, ಲೋಕಾನಾಂ ಪತಯೇ ನಮಃ ॥ ೮ ॥

ಫಲಶ್ರುತಿಃ

ಇತಿ ಶ್ರೀಸುರೇಂದ್ರವಿರಚಿತಾಂ ಶ್ರೀಸೂರ್ಯಸ್ತುತಿಂ ಯಃ ಪಠೇತ್ ಪ್ರಾತಃಸ್ನಾಯಿ ಶುಚಿರ್ಭೂತ್ವಾ । ತಸ್ಯ ಸೂರ್ಯಪ್ರಸಾದೇನ ನಶ್ಯಂತಿವ್ಯಾಧಯಃ ಸರ್ವೇ, ಧನಧಾನ್ಯಸಮೃದ್ಧಿಃ ಸ್ಯಾತ್, ಸರ್ವತ್ರ ಚ ವಿಜಯಃ ಪ್ರಾಪ್ನೋತಿ ॥

ಓಂ ಭಾಸ್ಕರಾಯ ವಿದ್ಮಹೇ, ಮಹಾದ್ಯುತಿಕರಾಯ ಧೀಮಹಿ, ತನ್ನಃ ಸೂರ್ಯಃ ಪ್ರಚೋದಯಾತ್ ॥ ಓಂಭಾನವೇ ನಮಃ ॥

ಶ್ರೀ ಹನುಮಸ್ತುತಿಃ

ಧ್ಯಾನಂ

ವಜ್ರದೇಹಂ ದಿವ್ಯವರ್ಣಂ ಪ್ರಕಾಶಂ, ರಕ್ತಾರುಣಾಂಭೋಜನೇತ್ರಂ ಕರಾಭ್ಯಾಮ್ । ಸುಗ್ರೀವಾದ್ಯೈಃಸೇವ್ಯಮಾನಂ ಪೀತಾಂಬರಾಲಂಕೃತಾಂಗಂ ಪ್ರಶಾಂತಮ್ । ಗೋಷ್ಪದೀಕೃತವಾರಾಶಿಂಪುಚ್ಛೇಂದುಕಲಾಧರಂ ವಿಭುಮ್ । ಏವಂಧ್ಯಾಯೇತ್ ಕಪೀಂದ್ರಂ ಹೃದಿ ಸದಾ ಹನುಮಂತಮೀಶ್ವರಮ್ ॥

ಸ್ತೋತ್ರಂ 

ಓಂ ನಮಃ ಪವನಸೂನವೇ, ನಮಃ ಸೀತಾಶೋಕಹಾರಿಣೇ । ನಮೋಲಂಕಾವಿದಾಹಾಯ, ನಮಃ ಸರ್ವಾರ್ತಿನಾಶಿನೇ ॥ ೧ ॥

ರುದ್ರಾವತಾರಾಯ ಬಲಿಣೇ, ಸಂಸಾರಭಯಘಾತಿನೇ । ವೈಷ್ಣವಾಯ ಪ್ರಣಮ್ರಾಯ,ರಾಮದೂತಾಯ ತೇ ನಮಃ ॥ ೨ ॥

ಜ್ಞಾನದಾತ್ರೇ ಚ ಭಕ್ತಾನಾಂ, ಕಾಮಧೇನೋ ನಮೋ ನಮಃ । ದುರ್ಗತಾನಾಂದುರ್ಗಹಂತ್ರೇ, ಶತ್ರೂಣಾಂ ಕಾಲರೂಪಿಣೇ ॥ ೩ ॥

ಏಕಾಂಗೇನ ಸಮುದ್ರಸ್ಯ ಲಂಘನಂ ಯೇನ ನಿರ್ಮಿತಮ್ । ಲಂಕಾಯಾಃದಹನಂ ಯೇನ, ತಸ್ಮೈ ವಜ್ರಾಂಗಯೇ ನಮಃ ॥ ೪ ॥

ಯಸ್ಯ ಗರ್ಜಿತಮಾತ್ರೇಣ, ರಾಕ್ಷಸಾನಾಂ ಭಯಂ ಕೃತಮ್ । ಯಸ್ಯ ಪುಚ್ಛೇನ ಬದ್ಧಾಸೀತ್ಲಂಕಾ ನಗರಿ ಸರ್ವಶಃ ॥ ೫ ॥

ಅಷ್ಟಸಿದ್ಧಿ ನವನಿಧಿ ಪ್ರದಾಯಕ, ಭಕ್ತವರದ, ಚಿರಂಜೀವಿ,ಮಹಾಬಲ, ಅಮಿತವಿಕ್ರಮ । ಈ ಸ್ತವ ಪಠಿಸುತ ಭಕ್ತರ, ಸಕಲೇಷ್ಟಾರ್ಥ ಸಿದ್ಧಿಸ್ತುನಿನ್ನ ಪ್ರಭಾವದ ॥ ೬ ॥

ಫಲಶ್ರುತಿಃ

ಇತಿ ಶ್ರೀಸುರೇಂದ್ರರಚಿತಂ ಶ್ರೀಹನುಮಸ್ತೋತ್ರಮಧ್ಯೇ ಯಃ ಪಠೇತ್ ಪ್ರಾತಃಕಾಲೇ ಭಕ್ತ್ಯಾ । ತಸ್ಯ ಹನುಮತ್ಪ್ರಸಾದಾನ್ನಾಶಂಯಾಂತಿ ವಿಘ್ನಾಃ, ಸಿದ್ಧ್ಯಂತೇ ಸರ್ವಕಾರ್ಯಾಣಿ, ಭವೇತ್ ಸರ್ವತ್ರ ವಿಜಯಃ ॥

ಓಂ ಶ್ರೀ ರಾಮಜಯರಾಮ ಜಯಜಯ ರಾಮ । ಓಂಶ್ರೀ ಹನುಮತೇ ನಮಃ ॥

Sunday, September 14, 2025

ಶ್ರೀ ಸುಬ್ರಹ್ಮಣ್ಯ ಸ್ತುತಿ

ಶ್ರೀಗುಹಾಯ ನಮಃ | ಶ್ರೀ ಫಾಲನೇತ್ರಸುತಾಯ ನಮಃ | ಶ್ರೀಸರ್ವಸ್ವಾಮಿನೇ ನಮಃ ||

ಶ್ರೀಸುಬ್ರಹ್ಮಣ್ಯ ಭೂಷಣ ಭುವನಪಾಲ ಕರುಣಾಸಿಂಧೋಶ್ರೀ ಸುರೇಂದ್ರಾರ್ಚಿತ | ಶರಣಾಗತ ಜನ ರಕ್ಷಕ ಭಕ್ತವತ್ಸಲ ನಿತ್ಯಂಮಾಂ ಪಾಹಿ ಚರಣಯುಗಳಂ ಭಜೇ || 

ಷಣ್ಮುಖ ಷಡಾನನ ಕುಮಾರ ಸ್ವಾಮಿ ಕೃತ್ತಿಕಾಸೂನೋಗಂಗಾಸುತ ಪ್ರಿಯ | ಶಕ್ತಿಧರ ಶಿಖಿವಾಹನ ದೇವಸೇನಾಪತೇ ತಾರಕಾರೇಸದಾ ಮಾಂ ಭವಬಂಧನಾತ್ ತ್ರಾಹಿ ||

ಹರಿಹರ ವಿನುತಾಂಘ್ರಿಸರೋಜ ಯುಗಳ ಪಾರ್ವತೀಹೃದಯಾನಂದ ಕಂದ | ಅಗ್ನಿಗರ್ಭ ಶಮೀಗರ್ಭ ವಿಶ್ವರೇತಸೇ ತವ ದಿವ್ಯಮಂಗಳ ವಿಗ್ರಹಂಧ್ಯಾಯೇ || 

ರಕ್ಷೋಬಲ ವಿಮರ್ದನ ದಾನವ ಕುಲಾಂತಕ ಪಿಶಿತಾಶ ಪ್ರಭಂಜನ ಭೀಷಣ| ದ್ವಿಷಡ್ಭುಜ ದ್ವಿಷಣ್ಣೇತ್ರ ಭೈರವ ಸ್ವರೂಪಿಣೇ ನಮಾಮಿತ್ವಾಂ ಭಕ್ತ್ಯಾ ಸಹ ಸೇನಯಾ ಸಾರ್ಧಂ ||

ಅನಂತಶಕ್ತೇಅಮೇಯಾತ್ಮನ್ ತೇಜೋನಿಧೇ ಅಕ್ಷೋಭ್ಯಾಯ ಅನಾಮಯಾಯ| ವೇದಗರ್ಭಾಯ ವೇದ್ಯಾಯ ವಿರಾಟ್ಸುತಾಯ ತುಭ್ಯಂನಮಃ ಪರಮ ಪುರುಷಾಯ ದೇವಾಯ ||

ಭಕ್ತಜನ ಮನೋಭೀಷ್ಟ ಫಲದಾಯಕ ರೋಗ ಶೋಕಾದಿವಿನಾಶಕರ | ಅಕ್ಷಯಫಲಪ್ರದ ಬ್ರಾಹ್ಮಣ್ಯ ಬ್ರಾಹ್ಮಣಪ್ರಿಯ ಪಾಹಿಮಾಂ ಸರ್ವದಾ ಸನ್ನಿಧಿಂ ಕುರು ||

ಸನಾತನಾಯ ಪರಮೇಷ್ಠಿನೇಪರಬ್ರಹ್ಮಣೇ ಆನಂದಾಯ ಅಮೃತಾಯ ಶಿವಾಯ| ಪ್ರಜ್ಞಾಯ ಪ್ರಾಣಾಯ ಪ್ರಾಣಸ್ವರೂಪಿಣೇ ನಮೋನಮಸ್ತೇ ಸತತಂ ಶ್ರೀ ಘನಶ್ಯಾಮಳಾಯ ||

ಇತಿಶ್ರೀಮತ್ಸುರೇಂದ್ರಾರ್ಚಿತ ಪಾದಪದ್ಮ ಭಕ್ತ್ಯಾಯಃ ಪಠೇತ್ ಸ್ತೋತ್ರಮಿದಂ ಮುದಾ | ತಸ್ಯ ಶ್ರೀಸುಬ್ರಹ್ಮಣ್ಯಃ ಪ್ರೀತ್ಯಾ ದದ್ಯಾತ್ಭಕ್ತಿಂ ಮುಕ್ತಿಂ ಚ ಶಾಶ್ವತೀಂ ||

ಶ್ರೀ ಸುಬ್ರಹ್ಮಣ್ಯಪರಬ್ರಹ್ಮಣೇ ನಮಃ | ಶ್ರೀಸರ್ವಸ್ವಾಮಿನೇ ನಮಃ | ಓಂಶಾಂತಿಃ ಶಾಂತಿಃ ಶಾಂತಿಃ ||

- ಸುರೇಂದ್ರ ನಾಡಿಗ್ 

ಮಹಾ ಸ್ಫೋಟ ಸಿದ್ಧಾಂತ!



(ಪ್ರಾರಂಭ - ಅಂಧಕಾರದ ಶಬ್ದಗಳು)
ಘನಘೋರ... ಘನಘೋರ...
ನಿಶ್ಶಬ್ದದ ಅಂಧಕಾರ...
ನಿಮಿಷವೇ ಮಹಾಯುಗ...

(ವಾದ್ಯಗಳ ಆರಂಭ - ಹೃದಯ ಬಡಿತ)
ಧಡ್-ಧಡ್-ಧಡ್-ಧಡ್...
ಧಡ್-ಧಡ್-ಧಡ್-ಧಡ್...

(ಮೊದಲ ಪ್ರವೇಶ - ವಿಕೃತ ಸ್ವರ)
ಕಣ್ಣುಗಳಿಲ್ಲ... ಕಿವಿಗಳಿಲ್ಲ...
ಕೇವಲ ಸ್ಪಂದನ... ಕೇವಲ ಸ್ಪರ್ಶನ...
ನಾ ಯಾರು?... ನಾ ಯಾರು?...

(ತಾಳವಾದ್ಯಗಳ ಉಗ್ರ ಪ್ರವೇಶ)
ಢಮ್-ಢಮ್-ಢಮ್-ಢಮ್!
ಢಮ್-ಢಮ್-ಢಮ್-ಢಮ್!

(ಕೇಂದ್ರ ಭಾಗ - ಉನ್ಮಾದ)
ಹಿಂದೆ ಏನಿತ್ತು? ಮುಂದೆ ಏನಿದೆ?
ಕೇವಲ ಈ ಕ್ಷಣ... ಕೇವಲ ಈ ಅಗ್ನಿ!
ಸುಡು! ಸುಡು! ಸುಡು!

(ಅತ್ಯುಚ್ಚ ಸ್ಥಿತಿ - ಸಂಪೂರ್ಣ ವಿಧ್ವಂಸ)
ಛಿದ್ರ! ಭಿದ್ರ! ವಿದ್ರವ್ಯ!
ಅಸ್ತವ್ಯಸ್ತ! ಅವ್ಯವಸ್ಥಿತ!
ಕೇವಲ ಶೂನ್ಯ! ಕೇವಲ ಶೂನ್ಯ!

(ಶಮನ - ಶಾಂತ ಭಾಗ)
ಊಂ... ಊಂ... ಊಂ...
ಶ್ವಾಸ ಮಾತ್ರ... ಹೃದಯ ಮಾತ್ರ...
ಏಕಾಕಿ... ಏಕಾಂತ...

(ಪುನರ್ನಿರ್ಮಾಣ - ನವಚೈತನ್ಯ)
ತುಣುಕುಗಳಿಂದ... ಚೂರುಗಳಿಂದ...
ಮತ್ತೆ ಕಟ್ಟುತ್ತೇನೆ... ಮತ್ತೆ ಸೃಷ್ಠಿಸುತ್ತೇನೆ...
ಹೊಸತಾಗಿ... ವಿಭಿನ್ನವಾಗಿ...

(ಅಂತಿಮ ಸ್ಫೋಟ)
ಜ್ವಾಲೆ! ಪ್ರಕಾಶ! ಶಕ್ತಿ!
ನಾನೇ ಸೃಷ್ಟಿ! ನಾನೇ ಸಂಹಾರ!
ನಾನೇ... ನಾನೇ... ನಾನೇ...

(ಸಮಾಪ್ತಿ - ಕ್ರಮಶಃ ಶಾಂತ)
ಊಂ...
ಊಂ...
ಊಂ...

- ಸುರೇಂದ್ರ ನಾಡಿಗ್ 

Saturday, July 10, 2021

ಒಂದೇ ಒಂದು ಲೋಕ ನೀನೇ

¶ನನ್ನ ಒಂದೇ ಒಂದು ಲೋಕ ನೀನೇ
ಲೋಕಕೆಲ್ಲ ಅಂದ ನೀನೇ
ಅಂದಕ್ಕೆಲ್ಲ ಹೃದಯ ನೀನೇ
ನೀ ನನಗೆ ಸ್ವಂತನೆ!?

ಚಂದದ ಮುಂಗೋಪ ನೀನೇ
ಕೋಪತಂದ ದೀಪ ನೀನೇ
ದೀಪದ ಹೊಳಪು ನೀನೇ
ನನ್ನ ಪ್ರಾಣನ ಬೆಳಗಿಸಿದೆ

ನಿನ್ನ ನಿನ್ನಂತೆ ಪ್ರೀತಿಸಲಾ?
ನನ್ನ ನಿನಗಾಗಿ ಅರ್ಪಿಸಲಾ?
ಪ್ರತಿಕ್ಷಣದಲ್ಲೂ ನಿನ್ನ ಕೂಡಿರಲಾ?
ಜನ್ಮ ಜನ್ಮಕು ಜೊತೆಯಾಗಲಾ?¶

ಕಣ್ಣಿನಲ್ಲೇ ನಿತ್ಯವೂ ನಿನ್ನೆ ಅಪ್ಪಿಕೊಳ್ಳಲ?
ಕಾಲವೆಲ್ಲ ನಾನು ನಿನಗೆ ಕಾವಲಾಗಲ?
ನೀ ಮರೆತ ಸಂತೋಷವ ನಾ ಮತ್ತೆ ಹಂಚಲ?
ಎಂದೆಂದಿಗೂ ನೆನೆವಂತೆ ಸಂತೋಷದಿ ಮುಳುಗಿಸಲ?
ಕಿರುನಗೆಯನ್ನೇ ಕಾಲ್ಗೆಜ್ಜೆಮಾಡಿ ಕಟ್ಟಲ?

ಕ್ಷಣಕೆ ನೀನು ಕಾಣದಿದ್ದರು ನಾನು ತಡೆಯೆನೆ
ಒಂದು ಹೆಜ್ಜೆ ದೂರಹೋದರು ನನ್ನುಸಿರಾಡದೆ
ಬಿಸಿಲು ನಿನ್ನ  ಸ್ಪರ್ಶಿಸಿದರೆ ನಾ ಬೆವರುವೆ
ಚಳಿ ನಿನ್ನು ತಾಕಿದರೆ, ನನ್ನಲಿ ನಡುಕವೇ
ದೇಹ ನಿನದೆ, ನಿನ್ನ ಪ್ರಾಣ ನಾನೇನೆ

-ಸುರೇಂದ್ರ ನಾಡಿಗ್

ಹಾಡು: ಒಕೆ ಒಕ ಲೋಕಮ್ (ಶಶಿ)
ತೆಲುಗು ಸಾಹಿತ್ಯ: ಚಂದ್ರ ಬೋಸ್

Saturday, March 20, 2021

ನಾ ಬುದ್ಧನಾಗಿರುವೆ!

ಬರೆಯದಾದೆ ನಾನು ಬದುಕು ಏನೆಂದು
ತಿಳಿದಿರುವತನಕ ಸಾವು ಮುಂದೆಂದು
ಯಕ್ಷಪ್ರಶ್ನೆ ನಾನು ನನಗೆಂದು
ಉತ್ತರವೇ ಇಲ್ಲದ ಜಗನಂದು 

ಈ ಕ್ಷಣಕೆ ಏಕೋ ಕೋಪ ಪ್ರತಾಪ
ಮರುಕ್ಷಣಕೆ ಬದಲಾದ ರೂಪ
ಜೀವನವು ಸುಖವ ಹುಡುಕುವ ನಿಕ್ಷೇಪ
ಆದಿಯಲೇ ನೆಡೆಯುವ ಸಮಾರೋಪ

ಬಗೆದಷ್ಟೂ ಆಳಕೆ ಇಳಿಯುವ ಒಲವೇ
ನೀ ಧೃತಿಚಿತ್ತವೇ? ನನ್ನ ಆತ್ಮಬಲವೇ?
ದೂರ ಸರಿದರು ಕಾಡಲೇಕೆ ಬರುವೆ
ನಿನ್ನ ಮೀರಿ ನಾ ಬುದ್ಧನಾಗಿರುವೆ!

-ಸುರೇಂದ್ರ

Monday, November 16, 2020

ಗುಪ್ತ ಗಾಮಿನಿ ಮನಸು


ಏನು ಇಲ್ಲದ ಊರಿನಲ್ಲಿ
ಯಾರು ಇಲ್ಲದ ಮನೆಯ ಒಳಗೆ 
ಅರ್ಧ ತೂಗುವ ಕುರ್ಚಿ ಮೇಲೆ 
ಏಕಾಂತ ಸವಿಯುತ ಕೂತೆನು | 

ಎಲ್ಲ ಜನರು ಎಲ್ಲಿ ಹೋದರು 
ಬೇಕೆಂದಾಗ ಯಾರೂ ಬರರು 
ನನ್ನ ಒಳಗಡೆ ಎಲ್ಲರು 
ಎಲ್ಲರೊಳಗಡೆ ನಾನು ಯಾರು? |

ಗುಪ್ತ ಗಾಮಿನಿ ಮನಸು ಸುಡುಗಾಡು 
ಮನದ ಕಡಲ ಒಳಗೆ ಮರಳುಗಾಡು
ವಿಷಕಾರುವ ಸಂಸಾರ ಕಾಡು
ಬಿಳಿ ಸರ್ಪಗಳ ಹಾಳು ಬೀಡು |

ಜೊತೆಗಿರುವನೆಂದ ಅವನೆಲ್ಲಿ
ನಾ ರಕ್ತಬಸೆದು ಉಳಿಸಿದ ಇವಳೆಲ್ಲಿ
ಅಲ್ಲಿ ಇಲ್ಲಿ ಮೀರಿ ಎಲ್ಲೆಗಳಲ್ಲಿ
ಯಾರು ಇಲ್ಲದ ಜಗದಲಿ 
ನಾ ಪೈಪೋಟಿ ಮಾಡಿದೆ ನನ್ನಲಿ |

-ಸುರೇಂದ್ರ ನಾಡಿಗ್

ನಾ ಎಂತ?!


ನಾನೊಬ್ಬ ಪರಕೀಯ, ಪರರಿಲ್ಲದ ಜಗದೊಡಯ
ಕನಸಿನ ನಡೆಯ, ನಿಜವೆಂಬ ಮಡೆಯ
ನಾ ಭಿಕ್ಕುಬೀಗುವ ಸಮಯ
ಎಲ್ಲೋ ಕೊನೆಯ ಬೀಡೆಯ ಭಯ!


ಸಾವೇಕೆ ಸುತ್ತಿದೆ ಸುತ್ತ, ಬರದೆ ನನ್ನತ್ತ
ಏಕಿಂತ ಅಂತ, ಜಗವೆ ದುರಂತ
ಸಮಯವ ದೂರುತ್ತ, ಹತ್ತಿರ ಬರುತ್ತ
ಕೊರಗಿದೆ ನಾ ಬರಿ ಸಾವಂತ? ನಾ ಎಂತ?!


ನನ್ನೊಳಗೆ ನಾನೊಬ್ಬ, ಅವನೊಳಗೆ ಇನ್ನೊಬ್ಬ
ಬಿದ್ದು ಏಳುವನೊಬ್ಬ, ಸಾವಿನೆಡೆ ಮತ್ತೊಬ್ಬ
ಮೋಹ ಧಿಕ್ಕರಿಸಿ ನೆಡೆ ಗುರಿಯಿಲ್ಲದೆಡೆ ಎನುವನೊಬ್ಬ
ತಾಳಿ ಬಾಳು ಎನುವ ಈ ಮನಸು ಅಬ್ಬಬ್ಬಾ!!


ತಿಳಿಯದಾದೆ ಬದುಕೆ! ಪ್ರಶ್ನೆಯಾ ನೀ? ಉತ್ತರವ ನೀ?
ಜವಕಂಜಿ ಬೆದರುವ ಹೇಡಿಯ ನೀ? ಮರ್ಮವಾ ನೀ?
ಸದಾ ಉಪದ್ರವಿಸೋ ಹ್ಹೇ ನನ್ನಂತರ್ಧ್ವನಿ
ಮೃತ್ಯುವನು ಮಣಿಸುವ ಅವಸನ ನೀ!!

-ಸುರೇಂದ್ರ ನಾಡಿಗ್


Monday, December 23, 2019

ಅಂತರಂಗದಲ್ಲಿ


ಪ್ರಶ್ನೆಯಾದೆ ನಾನು, ನನಗೆ
ತೀಕ್ಷ್ಣವಾದ ಮರುಳ ಬಗೆ
ಶಿಷ್ಠೆಯಾದೆ ನಾನು, ಜಗಕೆ
ಎಂದು ತೀರದ ಕನವರಿಕೆ

ಅಚ್ಚರಿ ನಾನು, ನಿನಗೆ
ತಿಳಿಯದ ಅರೆ ಸೊಬಗೆ
ತಿಳಿಯದಾದೆ ನಾನು, ಜನಕೆ
ಹಾಗೆ ಕಾಡುವ ಬೇಸರಿಕೆ

ನಾನೇಕೆ ಬೇಕೇ ನನಗೆ
ಮುಚ್ಚಿರುವ ಕೆಂಡದ ಹಾಗೆ
ಮುನ್ನೆಡೆ ಮನಸೇ ನೀನು
ಜೊತೆಗಿರುವೆ ನಿನ್ನೆಡೆ ನಾನು
ಜಗದಂಚಿಗೆ, ಯುಗದಂಚಿಗೆ
ನೀ ಕೋರಿದ ಸಾಧನೆಗೆ!

ಹೆದರದಿರು ನಶ್ವರಕೆ
ನೆಡೆಯುತಿರು ಕ್ಲಿಷ್ಟಕೆ
ದಿನವೊಂದಿದೆ, ಅದು ಮುಂದಿದೆ
ನಾ ನಿನ್ನದೇ ಎಂದಿದೆ!!

-ಸುರೇಂದ್ರ ನಾಡಿಗ್

Wednesday, July 27, 2016

ಗಿರ್ ಗಿಟ್ಲೆ ಕಣ್ಣಲಿ...

!! ಗಿರ್ ಗಿಟ್ಲೆ ಕಣ್ಣಲಿ, ಗುರುಗುರುನೆ ನೋಡುವೆ
ಕಾರಂಜಿ ಕೈಯಲಿ ಮುಂಗುರುಳ ತೀಡುವೆ !!

ನೀ ಬೇಡದಾಗ ಏಕೆ ಮುಂದೆ ಬಂದು ಹೋಗುವೆ
ಹೇಳು, ಸಂಜೆ ಬಂದು ಮನಸಿನಲ್ಲೆ ವಾರ್ತೆ ಓದುವೆ
ನಾ ನಿನ್ನ ನೋಡದಿದ್ದರೆ ಸಾದ ಆಳಾಗುವೆ
ನೀ ಕಂಡ ಕ್ಷಣದಲಿ ರಾಜನಾಗುವೆ!!
!!ನಾ ರಾಜನಾಗುವೆ!!

ಹಳೆಯ ನೆನೆಪುಗಳ ನೀ ಇಣುಕಿ ತೆರೆಯುವೆ
ಹೃದಯದ ಮಾತನು ನೀ ಹುಡುಕಿ ಹಿಡಿಯುವೆ

ಸೀತಾಳೆ ಸಿಡುಬು ನನ್ನ ಸಿಟ್ಟಲ್ಲಿ ಕುಟುಕ್ಕುವೆ
ಆಮೇಲೆ ಅಕ್ಕರೆಯಿಂದ ಆರೈಕೆ  ಮಾಡುವೆ
ಜೋಡಿಯಾಗು ನೀ ನನಗೆ, ಕೈ ಬೀಸಿ ಏಕೆ ಹೋಗುವೆ?
ಸಾಂಬ್ರಾಣಿ ಹೊಗೆಯಂತೆ ಸುತ್ತಿಸುತ್ತಿ ಮತ್ತೆ ಬರುವೆ!
ನೋಡಬೇಡ ನನ್ನ ಹೀಗೆ...
ನಿನ್ನ ನೋಡಿ ನಾ ಜಾರಲಿ ನಿದಿರೆಗೆ ಹೇಗೆ??

ಚಂದವಾಗಿ ಬಳುಕಿ ನನ್ನ ಹೃದಯಕ್ಕೆ ಚುಚ್ಚುವೆ
ಅಂದವಾಗಿ ನಕ್ಕು ನನ್ನ ಉಸಿರೆ ನಿಲ್ಲಿಸುವೆ!
ತಂಗಾಳಿಯಂತೆ ಬಂದು ಮನದಲ್ಲೆ ಬೀಸುವೆ
ಮುಸ್ಸಂಜೆ ಮಳೆಯಂತೆ ಮುತ್ತನು ಸುರಿಸುವೆ!!
ಕಾಲ ನೇರ ನೋಡದೆಯೆ ಹೇಳುವೆನು ನಿನ್ನ ಹೆಸರೆ
ಕೋಟಿದೇವ್ರ ಮೇಲಾಣೆ, ನೀ ದೇವತೆ ನನ್ನುಸಿರೆ
ತಾಕಬೇಡ ನನ್ನ ಹೀಗೆ..
ನಿನ್ನ ಸ್ಪರ್ಶಿಸಿ ನಾ ಬದುಕಲಿ ಹೇಗೆ??


- ಸುರೇಂದ್ರ ನಾಡಿಗ್

Monday, October 13, 2014

ಮುಗಿಯದಿರು ದಾರಿ...


ಮುಗಿಯದಿರು ದಾರಿ, ನಿನ್ನ ಮೇಲೆ ಹೊಂಟಿಹೆನು ಸವಾರಿ
ಬೆಟ್ಟಗುಡ್ಡಗಳ ಏರಿ, ಇಳಿ ಬಂಡೆಗಳ ಜಾರಿ
ಹೊಂಬಿಸಿಲ ಬುಟ್ಟಿಯಲಿ ನಾ ನೆಡೆದದೆ ದಾರಿ!!
ಮಾಯ ಮರ್ಕಟವೇರಿ, ಹಸಿರು ಕಾನನವ ಹಾರಿ
ನೀಲಿ ಸಾಗರ ಪಾರಿ, ಮರುಭೂಮಿಯ ಸವರಿ
ನಾನು ನನ್ನಿಚ್ಚೆಯಲಿ ಗಮ್ಯ ತಿಳಿಯದ ಅಲೆಮಾರಿ!!

ಯಾರು ಇಲ್ಲದ ಜಗದಲಿ, ನನ್ನನ್ನಾಳುವ ನನ್ನಲಿ
ಹಂಗಿರಲಿ, ಅಹಂ ಇರಲಿ, ಕಾಣದ ಖುಷಿಯಿರಲಿ
ಉಪ್ಪಿರಲಿ, ಸೊಪ್ಪಿರಲಿ, ಅನುಭವಿಸೊ ರುಚಿಯಿರಲಿ!!
ಜೊತೆಗೆ ಬಂದವರಿರಲಿ, ಎಲ್ಲೊ ನಿಂತವರಿರಲಿ
ಚಳಿಯಿರಲಿ, ಮಳೆಯಿರಲಿ, ತೊಯ್ಯದಿರು ಕಡೆಯಲಿ
ಬಿಸಿಲಿರಲಿ, ಬಿರುಗಾಳಿ ಬರಲಿ, ತಳ್ಳದಿರು ಜವರಲಿ!!

ಕನಸುಗಳ ಸಂತೆಯಿದೆ, ಕಟ್ಟುಪಾಡುಗಳ ಚಿತೆಯಿದೆ
ತಣಿವಿದೆ, ತ್ರುಷೆಯಿದೆ ಕನಸಿನ ಹಿಂದೆ
ನಿಂತ ಅರಿವಿದೆ, ಕೊಳ್ಳಿಹಿಡಿದಿದೆ, ಚಿತೆಯೇರಿದೆ!!
ಹೊಸ ಹುರುಪಿದೆ, ಯುಗಳ ಚಿಮ್ಮಿದೆ
ನ್ಯೂನ್ನತೆಯ ಲಕ್ಷ್ಯವಿದೆ, ಅಜ್ಞಾತ ತತ್ತ್ವವಿದೆ
ಎಲ್ಲ ತಿಳಿವಿದೆ ಮುಂದೆ ಮುಗಿಯದ ದಾರಿಯಿದೆ!!
                       -ಸುರೇಂದ್ರ ನಾಡಿಗ್

Tuesday, May 13, 2014

ಎಲ್ಲಿ ಹೋದೆ ಇಂದು?


ಕೇಳಲಿಲ್ಲ ಇಂದು ನಿನ್ನ ಪಿಸುಮಾತು
ನಿನ್ನ ನೋಡದೇನೆ ಒಂದು ಸಂಜೆಯಾಯ್ತು
ನಿನ್ನ ದನಿಗೆ ನಾ ಮನಸೋತು
ಕಾದಿರುವೆ ನಿನಗೆ ಇಲ್ಲೆ ಕೂತು ಕೂತು

ಊರು ಕೇರಿ ತಿರುಗಿ ಬಂದೆ ನೀ ಸಿಗುವೆ ಎಂದು
ಅಜ್ಜಿ ಅಂಗಡಿಲಿ ಬತ್ತಾಸು ಕೊಂಡುಕೊಂಡು
ಬಾವಿ ಕಟ್ಟೆ ಮೇಲೆ ಕುಂತೆ, ಕೊಡವ ಹಿಡಿದು ಕೊಂಡು
ಎಲ್ಲಿ ಹೋದೆ ಇಂದು? ಬೇಗ ಬಂದು ನೋಡು

ಮಲಗಿರುವೆಯ ನೀನು? ಜ್ವರ ಬಂದು?
ತಪ್ಪು ಮಾಡಿದೆ ಏನು? ಅಪ್ಪ ಸಿಡುಕಿದರೇನು?
ತಾಳಲರೆ ಇನ್ನು! ನಿನ್ನ ಮನೆಗೆ ಹೊರಟೆ ನಾನು!
ತಾಳು, ತಾಳು! ನಿನ್ನಮ್ಮ ಕೇಳಿದರೆ ನಾ ಉತ್ತರಿಸಲೇನು?

ಮೂಲೆ ಬೀದಿ ಮಾರಮ್ಮನ ಗುಡಿಗೆ ಕೈ ಮುಗಿದು
ಕೋಟೆ ಆಂಜನೇಯನಿಗೆ ಕಾಯಿ ಒಡೆದು
ನಮ್ಮಪ್ಪ ಗಣಪನಿಗೆ ಹರಕೆ ಕಟ್ಟಿಕೊಂಡು
ಹೆಜ್ಜೆ ಹೆಜ್ಜೆಗೂ ಹೆದರಿಕೊಂಡು, ನಿನ್ನ ಮನೆಗೆ ಬಂದೆ ನೋಡು

ಏಕೆ ಇಷ್ಟು ಜನರು? ಮನೆಯಲಿ ಹಬ್ಬವೇನು?
ನಮ್ಮಪ್ಪ ನಿಂತಿಹರು ಹೊಗೆ ಸರಿಸಿಕೊಂಡು
ಅಲ್ಲಿ, ಮಧ್ಯದಲಿ ಮಲಗಿರುವುದು ನೀನೇನು?
ನಿನ್ನುಸಿರು ಇರದೆ.... ನಿಂತಿತು ನನ್ನೆದೆಯ ಗೂಡು

   -ಸುರೇಂದ್ರ ನಾಡಿಗ್
ಎಲ್ಲಿ ಹೋದೆ ಇಂದು? (Female Version)




Sunday, October 13, 2013

ಪ್ರೀತಿಸುವೆಯ ನೀನು? ಒಮ್ಮೆ ಕೇಳಿಬಿಡಲೇನು??


ಕಣ್ಣಲಿ ಕನಸು, ನಿನ್ನಲ್ಲೆ ಮನಸು
ಏನಿಂತ ಸೊಗಸು, ನನ್ನನೆ ರಮಿಸು
ನಿನ್ನ ಕಂಡ ದಾರಿಯಲ್ಲೆ ನಾನು ಕಳೆದುಹೋದೆನು
ಬೇಡಿದೆ ವಯಸು, ಕಾಡಿದೆ ಉರುಸು
ನನ್ನೆ ವರಿಸು, ಇಲ್ಲ ಮರೆಸು
ನಿನ್ನ ಕಂಡ ಕ್ಷಣದಲೆ ನಾ ಉಳಿದುಹೋದೆನು

ಪ್ರೀತಿಸುವೆಯ ನೀನು????
ಒಮ್ಮೆ ಕೇಳಿಬಿಡಲೇನು?
ಪ್ರೀತಿಸುವೆಯ ನೀನು????
ಒಮ್ಮೆ ಕೇಳಿಬಿಡಲೇನು..?
ಪ್ರೀತಿಸುವೆಯ ನೀನು..????
ನಿನ್ನೆ ಕೇಳಿಬಿಡಲೇನು......?

ನನ್ನ ಮನಸು ಒಂಥರ ಮರುಭೂಮಿಯಂತೆ
ನಿನ್ನ ಒಂದು ನಗುವಿಗೆ ಹಸಿರಹಾಸಿತಂತೆ
ನೀ ಯಾವ ಊರ ರಾಜಕುಮಾರಿ?
ಕೊಳ್ಳೆಹೊಡೆದು ಹೋದೆ ನನ್ನೆದೆಯ ಕೇರಿ
ಏಲ್ಲ ಮರೆತು ನಾ ನಿನ್ನ ಹಿಂದೆ ಬಂದೆನು
ಏನು.. ಮಾಡಲಿ ಈಗ.. ತಿಳಿಯದಾದೆನು !

ಪ್ರೀತಿಸುವೆಯ ನೀನು????
ಒಮ್ಮೆ ಕೇಳಿಬಿಡಲೇನು?
ಪ್ರೀತಿಸುವೆಯ ನೀನು????
ಒಮ್ಮೆ ಕೇಳಿಬಿಡಲೇನು..?
ಪ್ರೀತಿಸುವೆಯ ನೀನು..????
ನಿನ್ನೆ ಕೇಳಿಬಿಡಲೇನು......?

ಕತ್ತಲಲಿ ಕನವರಿಸಿ, ನಿನಗಾಗಿ ಹಪಹಪಿಸಿ
ಮನದಲೆ ಆದರಿಸಿ, ನಿನ್ನ ಹಬ್ಬ ಆಚರಿಸಿ
ಬಂದೆ ಈಗ ನಾನು, ಮುಂದೆ ಮಾಡಲೇನು?
ನಿನ್ನನೆ ಧ್ಯಾನಿಸಿ, ಪೂಜಿಸಿ ಪರವಶಿಸಿ
ನೀ ನನ್ನನು ಆವರಿಸಿ, ಆಳಿಬಿಡು ನನ್ನರಸಿ...

ಪ್ರೀತಿಸುವೆಯ ನೀನು????
ಒಮ್ಮೆ ಕೇಳಿಬಿಡಲೇನು?
ಪ್ರೀತಿಸುವೆಯ ನೀನು????
ಒಮ್ಮೆ ಕೇಳಿಬಿಡಲೇನು..?
ಪ್ರೀತಿಸುವೆಯ ನೀನು..????
ನಿನ್ನೆ ಕೇಳಿಬಿಡಲೇನು......?


                       -ಸುರೇಂದ್ರ ನಾಡಿಗ್

Monday, June 24, 2013

ಒಲವೆ ನೀ ದೇವರ ವರವ? ಸೋಜಿಗ.... ಅಲ್ಲವ ??



ಮೊದಮೊದಲ ಮೋಹದ ನೋಟ
ಕಣ್ಣಲ್ಲೆ ನೀ ಮಾಡಿದೆ ಮಾಟ
ಒಲವೆ ನೀ ದೇವರ ವರವ
ಸೋಜಿಗ.... ಅಲ್ಲವ ??

ಇದು ತುಂತುರು ಹನಿಗಳ ಲೋಕ
ಹನಿ ಹನಿಯಲ್ಲು ನಿನ್ನದೆ ಶ್ಲೋಕ
ಒಲವೆ ನೀ ತೋರಿದೆ ಜಗವ
ಒಡ್ಡೋಲಗ.... ಅಲ್ಲವ ??


ಮುಂಜಾವಲಿ ನಿನ್ನದೆ ಕನಸು
ಮುಸ್ಸಂಜೆಗೆ ಕಾದಿದೆ ಮನಸು
ಇದು ಸಾವಿರ ದೇವರ ಕೊಸರು
ನೀನಿದ್ದರೆ ಕೋಟಿ ನೆಸರು
ನಿನ್ನ ನಗುವಿಗೆ ಮರೆತೆನು ಕ್ಷಣವ
ವ್ಯಪಕ.... ಅಲ್ಲವ ??

ಕಿವಿ ತುಂಬಿದೆ ನಿನ್ನದೆ ಮಾತು
ಕಣ್ಣಲ್ಲಿ ನಿನದೇ ಜಾಹಿರಾತು
ಮನಸಲ್ಲಿ ಏನಿದು ಕದನ
ನಾಚಿಕೆ ಬಿಟ್ಟಾಗಿದೆ ಸದನ
ನೀ ಹೂಬುಗ್ಗೆಯಲಿ ಚಿಮ್ಮಿ ಬರುವ
ಅಚ್ಚರಿ.... ಅಲ್ಲವ ??

   -ಸುರೇಂದ್ರ ನಾಡಿಗ್

Wednesday, July 4, 2012

ಮಗುವಂತ ಮನಸೀಗು ಮಕ್ಕ್ಳಾಗಿದೆ !!


ಪರಪಂಚ ಇಂದೇಕೊ ಹಾಳಾಗಿದೆ
ಮೆಷೀನು ಲೈಫು ಬಾಳಾಗಿದೆ
ಈಗೀಗ ಲವ್ವು ಓಲ್ಡಾಗಿದೆ
ನನ್ನ ಮಗುವಂತ ಮನಸೀಗು ಮಕ್ಕ್ಳಾಗಿದೆ !!
ಹುಡುಕಿದರು ಇಷ್ಕು ಇಲ್ಲವಾಗಿದೆ
ಮಗುವಂತ ಮನಸೀಗು ಮಕ್ಕ್ಳಾಗಿದೆ !!

ಹೆಣ್ಮಕ್ಕ್ಳ ವಿಚಾರ ಬೋರಾಗಿದೆ
ಗಂಡೈಕ್ಳ ಸಹವಾಸ ಸಾಕಾಗಿದೆ
ಒಬ್ಬೋಬ್ಬನೆ ಕೂತಾಗ ಸಾವಾಗಿದೆ
ನನ್ನ ಮಗುವಂತ ಮನಸೀಗು ಮಕ್ಕ್ಳಾಗಿದೆ !!
ಗೆಲುವೆಂಬ ಕುದುರೆ ಕನಸಾಗಿದೆ
ಮಗುವಂತ ಮನಸೀಗು ಮಕ್ಕ್ಳಾಗಿದೆ !!

ಯಾವನೊ ಬೇಡಿದಾ ಅಂತ ಮತಹಾಕಿದೆ
ನೋಡೊಕ್ಕೆ ಹಾನೆಸ್ಟು ಎಂದೆನಿಸಿದೆ
ಗೆದ್ದೆತ್ತು ಕೂಡ ಗೆಲುವಾಗಿದೆ
ಹಿಂಡಿ ಹಾಕ್ದೋರ ಮರೆತೋಗಿದೆ
ಈಗ ವೋಟಿಗೊಂದರಂತೆ ಸ್ಕ್ಯಂಡಲ್ ಇದೆ
ಮಗುವಂತ ಮನಸೀಗು ಮಕ್ಕ್ಳಾಗಿದೆ !!

ಮದುವೆಗೆ ಮೂರ್ ತಿಂಗಳ ಡೈವೊರ್ಸಿದೆ
ಕ್ರೆಡಿಟ್ ಕಾರ್ಡ್ ಗೆ ಇ.ಮ್.ಐ ಆಫರ್ ಇದೆ
ಲಿವ್-ಇನ್ನು, ನೈಟ್-ಸ್ಟ್ಯಂಡು ಕಾಮನ್ನಾಗಿದೆ
ನನ್ನ ಮಗುವಂತ ಮನಸೀಗು ಮಕ್ಕ್ಳಾಗಿದೆ !!
ಕಲ್ಚರ್ರು ಬುಕ್ಕಲ್ಲಿ ಸೇಫಾಗಿದೆ
ಮಗುವಂತ ಮನಸೀಗು ಮಕ್ಕ್ಳಾಗಿದೆ !!

ಶಾಂತಿನ ಸೇಲ್ ಮಾಡೋ ಸ್ಕೂಲು ಇದೆ
ಸೆಮಿಸ್ಟ್ರು ಜ್ಞಾನನ ನೂಂಗಾಕಿದೆ
ಹಿಸ್ಟರಿ ಬರೆದೋಂದೆ ಫ಼ೇಲ್ ಆಗಿದೆ
ನನ್ನ ಮಗುವಂತ ಮನಸೀಗು ಮಕ್ಕ್ಳಾಗಿದೆ !!
ಸಾಕಾಯ್ತು ಈ ಚೇಂಜು ಎಂದೆನಿಸಿದೆ
ಮಗುವಂತ ಮನಸೀಗು ಮಕ್ಕ್ಳಾಗಿದೆ !!

                             -ಸುರೇಂದ್ರ ನಾಡಿಗ್

Monday, April 16, 2012

ಹಸಿವು


ಯಾರೊ ಕರೆದ ಕರೆ ನಿನಗೆ ಕೇಳಿತೆ? 
ಹಸಿದು ಕೂಗುತಿರುವುದು ನನಗೆ ಕೇಳಿತೆ...
ಹುಟ್ಟಿಸಿದ ದೈವವು ಹುಲ್ಲನ್ನು ಕೊಡದೆ
ಹಸಿವಾಗಿ ಬಂದು ಕಾಡುತಿಹನೆ

ತಿಳಿದಿರುವೆಯ ನೀನು ಹಸಿವಿನ ನೋವನು?
ನೂರಂತಸ್ತಿನ ಮಹಡಿಯಲ್ಲಿ ಕುಳಿತ ನಿನಗೆ ಹೇಗೆ ತಿಳಿವುದು..
ಕಿತ್ತು ತಿನ್ನೊ ಬಡತನ, ಅದಕು ನಿನ್ನ ಒಡೆತನ
ಪ್ರೀತಿಯ ಆತ್ಮಾಹುತಿಗೆ ನಿನ್ನ ಸಿರಿವಂತಿಯೆ ಸೋಪಾನ

ಸೂರು ನೆರಳಿಲ್ಲದೆ ನರಳಿ ನಡುಗುತಿಹರು
ಹುಟ್ಟಿನಿಂದ ಸಾವಿನೊರೆಗು ನಲಿವೆ ಕಾಣರು
ಗಂಧದ ಕೊರಡಂತೆ ತೆಯ್ಯುವೆ ನೀನು
ಅವರ ಪ್ರತಿ ಬೆವರ ಹನಿ ಸುಮ್ಮನೆ ಬಿಡದು

ನಿನ್ನ ಕಣ್ಣಮುಂದೆಯೆ ನೆತ್ತರು ಹರಿವುದು
ಅವರ ಜೀವ ತಿನ್ನುವ ನಿನಗೆ ಹಸಿವು ತಿಳಿಯದು
ಹಸಿವನು ಹಸಿ-ಹಸಿಯಾಗಿ ಕಂಡಿರುವರು ಅವರು
ಸಿರಿಯ ಮೆಟ್ಟಿ ನಿಲ್ಲೊ ಶಕ್ತಿ ಹಸಿವಿಗಿರುವುದು

                                     -ಸುರೇಂದ್ರ ನಾಡಿಗ್ ೨೦೦೨

Saturday, March 3, 2012

ನಿನ್ನ ಭಾಷೆಯು ಬಾ ಎಂದು ಕರೆದಿದೆ ಬಾ ಕನ್ನಡಿಗ..!!

"ನಿನ್ನ ಪುಟ್ಟ ಮನದಲ್ಲಿ,
ಆಚೆ ಎಲ್ಲೊ ದೂರದಲಿ,
ಈ ಕೂಗು ಕೆಳದ ನಿನಗೀಗಾ..??
ನಿನ್ನ ಭಾಷೆಯು ಬಾ ಎಂದು ಕರೆದಿದೆ ಕೇಳೋ ಕನ್ನಡಿಗ
ನಿನ್ನ ಭಾಷೆಯು ಬಾ ಎಂದು ಕರೆದಿದೆ ಬಾ ಕನ್ನಡಿಗ"


ಈ ನಾಡಿದು ನಿನ್ನಿಂದ
ಸವಿ ಸಂಪಿಗೆ ಪದದಿಂದ
ಕೋಂಚವು ನಿನಗೆ ನೆನಪಿಗೆ ಬರದ??
ಇದು ಸಾವಿನ ಆಚೆಗು ಬಿಡಿಸಲಾಗದ ಬಂಧ


ಮರೆವೆನೆಂದರು ಆಗದೆಯೆ
ಇರಲಾಗದು ಕನ್ನಡ ನುಡಿಯದೆ
ಜಗವನ್ನೆ ಗೆದ್ದರು ನೀನು, ಕರುನಾಡೇ ನಿನ್ನ ತಾಯಿನಾಡು
ಎಲ್ಲಿ ಹೇಗೆ ಇದ್ದರು ನೀನು
ಕನ್ನಡಾಂಬೆ ಕಾಯುವಳು
ಪುಣ್ಯಭೂಮಿ ಈ ಮಣ್ಣು, ಕಣ್ಣು ಮುಚ್ಚಿ ಮರೆವುದೇನು??


"ನಿನ್ನ ಪುಟ್ಟ ಮನದಲ್ಲಿ,
ಆಚೆ ಎಲ್ಲೊ ದೂರದಲಿ,
ಈ ಕೂಗು ಕೆಳದ ನಿನಗೀಗಾ..??
ನಿನ್ನ ಭಾಷೆಯು ಬಾ ಎಂದು ಕರೆದಿದೆ ಕೇಳೋ ಕನ್ನಡಿಗ
ನಿನ್ನ ಭಾಷೆಯು ಬಾ ಎಂದು ಕರೆದಿದೆ ಬಾ ಕನ್ನಡಿಗ"


ಕಾವೇರಿ ಇಲ್ಲಿ ಹರಿದಿಹಳು
ತುಂಗೆ ನಿನ್ನ ತೊಳೆದಿಹಳು
ಸಹ್ಯಾದ್ರಿ ಹಸಿರು ತುಂಬಿಹುದು
ಪ್ರತಿದಿನವು ನುಡಿಜಾತ್ರೆ ನೆಡೆದಿಹುದು
ನೀ ಕಣ್ಣಾಮುಚ್ಚೆ ಆಟ ಕಲಿತು
ಟಪ್ಪಂಗುಚ್ಚಿ ಆಡಿ ನಲಿದು
ಮರಕೋತಿಯಾಡಿ ಕಾಲು ಮುರಿದು
ಏನು ತಿಳಿಯದಂತೆ ಎಲ್ಲ ಮರೆತು
ಈಗ ಎನೊ ತಿಂದು, ಎಲ್ಲೊ ಮಲಗುವುದು ಒಂದು ಬದುಕ...???


"ನಿನ್ನ ಪುಟ್ಟ ಮನದಲ್ಲಿ,
ಆಚೆ ಎಲ್ಲೊ ದೂರದಲಿ,
ಈ ಕೂಗು ಕೆಳದ ನಿನಗೀಗಾ..??
ನಿನ್ನ ಭಾಷೆಯು ಬಾ ಎಂದು ಕರೆದಿದೆ ಕೇಳೋ ಕನ್ನಡಿಗ
ನಿನ್ನ ಭಾಷೆಯು ಬಾ ಎಂದು ಕರೆದಿದೆ ಬಾ ಕನ್ನಡಿಗ"


ಕೇಳು ನಿನ್ನ ಹೃದಯವನು,
ಕನ್ನಡವು ನಿನ್ನ ಕರೆದಿಹುದು
ಆಡಲು ಸಾವಿರ ಭಾಷೆಗಳಿರಬಹುದು
ನಿನ್ನ ಮನಸಿನ ಕನ್ನಡ ಭಾಷೆಯಿದು
ಕನ್ನಡಾಂಬೆ ಕಣ್ಣೀರೊರೆಸೊ ಕೈಗಳಾಗು
ಎದುರು ಬಂದವರ ಮೆಟ್ಟೊ ಶಕ್ತಿಯಾಗು
ಕನ್ನಡಕ್ಕೆ ಕೈಯೆತ್ತಿ ನೀ ಮುನ್ನೆಡೆ
ಈ ನಾಡು ಬರುವುದು ನಿನ್ನಾ ಹಿಂದೆ
ಈ ತಾಯಿನಾಡು ನಿನ್ನ ಕರೆದಿದೆ... ಕನ್ನಡಿಗ


"ನಿನ್ನ ಪುಟ್ಟ ಮನದಲ್ಲಿ,
ಆಚೆ ಎಲ್ಲೊ ದೂರದಲಿ,
ಈ ಕೂಗು ಕೆಳದ ನಿನಗೀಗಾ..??
ನಿನ್ನ ಭಾಷೆಯು ಬಾ ಎಂದು ಕರೆದಿದೆ ಕೇಳೋ ಕನ್ನಡಿಗ
ನಿನ್ನ ಭಾಷೆಯು ಬಾ ಎಂದು ಕರೆದಿದೆ ಬಾ ಕನ್ನಡಿಗ"

                                                       -ಸುರೇಂದ್ರ ನಾಡಿಗ್

Monday, February 13, 2012

ಒಲವು ಅತಿಯಾಗಿ ಮಿತಿಮೀರಿದೆ..


ಸವಿ ಕನಸು ಮೂಡಿದ ಗಳಿಗೆ ಇದಾಗಿದೆ
ನಿನ್ನ ನಗುವ ನೋಡಿ ಮನಸಿಗೆ ಹಾಯಾಗಿದೆ
ಏನಾಗಿದೆ? ಏನೋ ಆಗಿದೆ...
ನಿನ್ನ ಹೆಸರು ಕೂಗೊ ಬಯಕೆ ಮನಕೆ
ಮಿತಿ ಮೀರಿ ಅತಿಯಾಗಿದೆ
ಹೇಗೊ ಆಗಿದೆ.. ಹೇಗೇಗೊ ಆಗಿದೆ
ನಿನ್ನದೆನೊ ಸೆಳೆವು, ಬಾರಿ ಒಲವು ಮನದಿ
ಅತಿಯಾಗಿ ಮಿತಿಮೀರಿದೆ


ಯಾವ ಸೀಮೆ ದೇವತೆ ನೀನು, ಒಲವ ವರ್ಷ ಸುರಿಸಿದೆ
ಢವ ಢವ ಹೃದಯಕೆ ಇನ್ನು ಸಾಲದೆಂದು ನಾ ಬೇಡಲು ಬಂದೆ
ಕೋವಿಯನ್ನು ಮುಂದೆ ಇರಿಸಿ ಸುಡುವುದೇನು ಪ್ರೇಮವೆಂದೆ
ಸಾವಿಗು ಮಂಪರು ಬಡಿದು ಪೀತಿಗೆ ಪರವಶನಾದೆ
ಏನಾಗಿದೆ? ಏನೋ ಆಗಿದೆ...
ನಿನ್ನ ಜೊತೆಗೆ ಗಳಿಗೆ ಕಳೆಯೋ ಹರಕೆ ಮನಕೆ
ಮಿತಿ ಮೀರಿ ಅತಿಯಾಗಿದೆ
ಹೇಗೊ ಆಗಿದೆ.. ಹೇಗೇಗೊ ಆಗಿದೆ
ನಿನ್ನದೆ ಹರೆಯ ಕರೆಯ ಕೇಳೊ ಆಸೆ ಮನದಿ
ಅತಿಯಾಗಿ ಮಿತಿಮೀರಿದೆ


ನನ್ನೋಲವು ಊರಿದು ಗೆಳತಿ, ನೀ ಏಂದೊ ಇದರ ರಾಣಿಯಾದೆ
ಪ್ರತಿ ಅಣುವಿನಲ್ಲು ನಾ ಬರೆದ ಹೆಸರು ನಿಂದೆ
ಸುಡುಗಾಡು ಮರಳುಗಾಡು ಮಲೆನಾಡಗಿದೆ
ನೀ ಎರೆದ ಒಲವಲಿ ಬೆರೆತು ನಾನೇ ಕಡಲಾದೆ
ಏನಾಗಿದೆ? ಏನೋ ಆಗಿದೆ...
ನಿನ್ನನೆ ಸೇರೊ ಬಯಕೆ ಮನಕೆ
ಮಿತಿ ಮೀರಿ ಅತಿಯಾಗಿದೆ
ಹೇಗೊ ಆಗಿದೆ.. ಹೇಗೇಗೊ ಆಗಿದೆ
ನಿನ್ನದೆ ನಗುವು, ಮನದಿ ನಲಿವ ಒಲವು
ಅತಿಯಾಗಿ ಮಿತಿಮೀರಿದೆ


                                   -ಸುರೇಂದ್ರ ನಾಡಿಗ್

Wednesday, January 18, 2012

ಅಕಾರ ವಿಕಾರ ನನ್ನಂತರಾಳ


ಕನಸು ಕಾಣುವ ಕರ್ಮ
ಸಾವು ತಿಳಿದು ಬಾಳುವ ಜನ್ಮ
ಅಕಾರ ವಿಕಾರ ನನ್ನಂತರಾಳ


ಕುದಿಸಿದ ಹಾಲು ಕಳೆದು ಹುಳುವಾದಂತೆ
ದಿನಗಳೆದಂತೆ ನನ್ನ ಮನಸು ಹೊಲಸು
ಕಾಯಿಸಿದ ಕಬ್ಬಿಣವು ಕಳೆಗುಂದಿದಂತೆ
ಚೂರು ಚೂರು ನನ್ನಿ ಬಿರುಸು ಕನಸು


ಯಾರು ಅರಿಯದ ಮರ್ಮ, ತಿಳಿಯಲಾಗದ ತರ್ಕ
ಬದುಕ ಬಂಡಿಯು ತೆವಳೊ ಪರದೇಶಿ ಪರ್ವ
ಸಾಧನೆಗೂ ಸಂಧಾನ, ಮನಸಿಗೋ ಮಂಥನ
ನೋವು ನಲಿವಿದು ಇಲ್ಲಿ ನಿರಾಳ ನರಕ..!!


ಸರಿ ಕ್ಷಣವು ಏಕೆ ದೇವರನಾಮ, ಹೇಜ್ಜೆಗೊ ಓಮ್ಮೆ ರಾಮ ರಾಮ
ಸ್ಮ್ರುತಿಪಟಲ ಸಖಿಧಾಮ, ಜೊಳ್ಳು ತುಂಬಿದ ದೇಹದಿ ಸತ್ಯಕಾಮ
ತೊರೆಬಡಿದ ತೀರದಲಿ, ತೆರೆಯೆಳೆದ ಮಂಟಪದಿ
ಕುಂದದಾ ಕಂಬನಿಗೆ ಇಲ್ಲ ಕ್ಷಾಮ..!!


ನಶ್ವರತೆಯ ಕಾವಲೇ ಧರ್ಮ?
ಸುರಸ್ಪರ್ಶ ಸಡಿಲಿಪುದೆ ಸಂಘರ್ಷ?
ಅಕಾರ ವಿಕಾರ ನನ್ನಂತರಾಳ


                  - ಸುರೇಂದ್ರ ನಾಡಿಗ್

Monday, December 19, 2011

ನೀ ಕಾಮನಬಿಲ್ಲು, ಯಾವ ಬಣ್ಣವಾಗಲಿ ನಾನು

ನೀ ಕಾಮನಬಿಲ್ಲು, ಯಾವ ಬಣ್ಣವಾಗಲಿ ನಾನು
ಮುಗಿಯದ ಮಳೆ ನೀನು ಯಾವ ಹನಿಯನು ಸೇರಲಿ ನಾನು
ನೀ ಬರೆದ ಕವಿತೆಯಲಿ ಯಾವ ಪದವಾಗಲಿ ನಾನು
ನಿನ್ನನೆ ನೋಡುತ ಮಾತು ಮರೆತ ಮೌನಿ ನಾನು

ನಿನ್ನ ನೆನೆದರೆ ಸಾವಿರ ಬಣ್ಣದ ಹೋಲಿ
ನೀ ನಕ್ಕರೆ ಕಣ್ಣಿಗೆ ಬೆಳಕಿನ ದಿವಲಿ
ಹೇಳಬೇಕು ಇದನು ನಿನ್ನ ಕಿವಿಯಲಿ
ನಾ ಮುಳುಗಿರುವ ಪಾಪಿ ನಿನ್ನ ಪ್ರೀತಿಯಲ್ಲಿ

ಯಾವ ಪರಿ ನೀನು ತುಂಬಿರುವೆ ಹೃದಯವನು
ನನ್ನ ಕಲ್ಪನೆ ನೀನು ಕನಸು ನೀನು
ನಿನಗಾಗೆ ಕಾದು ಕುಳಿತ ನಾನು
ಪದಗಳನೆ ಮರೆತ ಕವಿಯಾದೆನು

Monday, October 31, 2011

ನುಡಿಸಿರಿ ತವರು, ಅಕ್ಷರ ಜಾತ್ರೆಯ ಹಸಿರು
ಪರಿ ಕಬ್ಬಿಗರುಳಿಸಿದ ಪಸಿರು
ಜುಮ್ಮೆನಿಸುವ ರಾಜರ ಕೊಸರು
ಜೇನಲೆಗಳು ಮೂಡಿದ ಕೆಸರು
ಸುಯ್ದಾಡಿದ ದಾಸರ ಕಂಠದ ನೆಸರು
ಕನ್ನಡದೋಕುಳಿ ಮಿಯ್ಯುವ ಸೂರು
ಕನ್ನಡ ಕರಿಮಣಿ ಹೆಮ್ಮೆಯ ಸಾರು
ಅರಿಶಿಣ-ಕುಂಕುಮ ಬಾವುಟ ಎತ್ತರದಲಿ ಹಾರು
ನೀ ಎಲ್ಲಿದ್ದರು ಹೇಗಿದ್ದರು ಕನ್ನಡವನೆ ಸೇರು

Tuesday, April 19, 2011

ಕಾಣದ ಕನ್ನಿಕೆ ನಲ್ಮೆಯ ನಲ್ಲೆ..!!


ಕಾಣದ ಕನ್ನಿಕೆ ನಲ್ಮೆಯ ನಲ್ಲೆ
ನೀ ಬರುವೆ ಎಂದೆ ಕಾದಿರುವೆ
ಮಳೆಯು ಸೋನೆ ಸುರಿಸಿದೆ ಇಲ್ಲೆ
ನೀ ಏಲ್ಲಿಹೆ ಹೇಳು ನಾ ಬರುವೆ
ಮುಚ್ಚಿದ ಚಿಪ್ಪಲಿ ಮುತ್ತಿಡುವಂತೆ
ನನ್ನಿ ಬಂಧದಿ ಬೆಚ್ಚನೆ ಇಡುವೆ


ಇರಚಲು ಹೊಡೆದಿದೆ ತೆಂಕಣದಿಂದ
ಮೇಘವು ಹೊರಳಿದೆ ಬಡಗಣದಿಂದ
ಅರಳಿ ಮರದಡಿ ನಿಂತುಬಿಡು
ನನಗೆಂದು ಸ್ವಲ್ಪವೇ ಜಾಗವಿಡು
ಬೇಗನೆ ಬರುವೆ ನೋಡೊ ಆತುರವಿಹುದು
ಕೈಯಲಿ ಕೆಂಪನೆ ಗುಲಾಬಿಯಿಹುದು


ಕೆರೆಯು ತುಂಬಿದೆ ನಿನಗೇಳಲೆ ಬೇಕು
ಕೋಡಿಯ ಮಧ್ಯಕೆ ನಿನ್ನ ಕರೆತರಬೇಕು
ಬೆದರಿದ ಬೊಂಬೆ ಕಣ್ಮುಚ್ಚುವೆ ನೀನು
ಕಾಲು ನಡುಗಿಸಿ ಜಾರಿಸುವೆನು ನಾನು
ಕೋಟೆ ಮಾರುತಿಯ ನೆನೆದು ನೀನು
ಹಿಡಿದಪ್ಪುವೆ ತೋಳನು, ನನ್ನನ್ನು


ಕಾಣದ ಕನ್ನಿಕೆ ನಲ್ಮೆಯ ನಲ್ಲೆ
ನೀ ಎಲ್ಲೆ ಇರುವೆ ನಾ ಬಂದಿರುವೆ
ಪೇಟೆಬೀದಿಯಲಿ ಮದುವೆಯ ದಿಬ್ಬಣ ಒಂದಿದೆ
ನಾ ಅದನು ದಾಟಿ ಬರುತಿರುವೆ
ನನಗ್ ತಿಳಿಯದ ಮದುವೆ ಯಾವುದೋ ಕಾಣುವೆ
ನೀ ಮಧುಮಗಳಾಗಿ ಕುಂತಿರುವೆ
ನೀ ಮಧುಮಗಳಾಗಿ ಕುಂತಿರುವೆ...

ಕೂಡಕುಂತು ಎದೆಯಲಿ



ಚಲುವಿನ ಅಂಗಳದಲಿ
ನೀ ನನ್ನ ಜೊತೆಯಲಿ
ಕೂತಿರಲು ಕೊನಯಲಿ
ನಗುನಗುತಲಿ


ನಗುತಿರುವೆ ಪಕ್ಕದಿ
ಕೂಡಕುಂತು ಎದೆಯಲಿ
ಮುತ್ತಿಡುವ ಆಸೆಯ
ಬಚ್ಚಿಡುವೆ ಒಡಲಲಿ


ನಿನ್ನ ಉಸಿರು ಬಂದಿದೆ
ನನ್ನ ಸೇರಲೇಂದಿದೆ
ಬೇಡೆನ್ನಲಾರದೆ
ಏನೇನು ತಿಳಿಯದೆ ಸ್ವೀಕರಿಸಿಹೆ


ಏಲ್ಲಿ ಕಳೆದು ಹೋಗುವೆ
ನಾ ಇಲ್ಲೆ ಕುಳಿತು ಕಾಯುವೆ
ನೀ ಎಲ್ಲೆ ಹೋದರು
ಭೂಮಿ ದುಂಡಗಿರುವುದೆ


ನೀನಿರದ ಇರುಳು
ಸುಡುಬಿಸಿಲ ಮಧ್ಯನ್ಹ
ನಿನ್ನದೆ ಕನವು
ಸುಡುತಿಹುದು ಏದೆಯ


ನೇತ್ತರಲ್ಲಿ ಬರೆಯ ಹೋದೆ
ನೆನೆದು ನೆನೆದು ನಿನ್ನ ಹೆಸರ
ಕಂಬನಿಯಲ್ಲಿ ಬೆರೆಸಿ ಬರೆದೆ
ನಿನ್ನ ಚಿತ್ರವ


ಸಿಗಳು ಅವಳು ಎಂದು
ತಿಳಿದು ತಿಳಿದು ಪ್ರೀತಿಸಿಹೆನು
ಏಲ್ಲೊ ದೂರ ಬರುವುದೆಂದು
ಬೆಳ್ಳಿಬೆಳಕೆಂಬ ಭ್ರಮೆಯು


ಕಡಲೊಂದು ನಡುಗಿದೆ
ಒಲವ ಮುತ್ತು ಒಡಲೊಳಗೆ
ಅರಳದಂತೆ ಬಾಡಿತು ಕೊನೆಗು
ನಗುವ ಕೇಳಿಗೆ

ನೀ ಗುನುಗುತಿರುವೆ ಏನು?



ನೀ ಗುನುಗುತಿರುವೆ ಏನು? ನಾ ನುಡಿಯುತಿರುವೆ ನಿನ್ನ ಹೆಸರನು
ನೀ ನೋಡುತಿರುವೆ ಏನು? ನಾ ನಿನ್ನೆ ನೋಡುತಿರುವೆನು
ಹೇಗೆ ಇರಲಿ ಸುಮ್ಮನೆ; ಏದುರು ನಿನ್ನ ನೊಡದೆ
ಏನೊ ಮಾಡಬೇಕಿದೆ; ತಿಳಿಯದಾಗಿದೆ


ಕಣ್ಣು ಮುಚ್ಚಲಾರೆ ನಾನು, ನೀ ಎದುರು ಬಂದರೆ
ಕಣ್ಣ ಮುಚ್ಚಿಬಿಟ್ಟರೆ ಕ್ಷಣಕೆ ಕಾಣದಾಗುವೆ
ಹೇಗೆ ಶುರು ಮಾಡಲಿ? ಮಾತನಾಡಬೇಕಿದೆ
ನಿನ್ನ ನಗುವ ನೋಡಲೆ ಹಂಬಲಿಸಿರುವೆ


ಮೆಟ್ಟಿಲೇರಿ ಬರುವೆ ನಾನು, ಮುಸ್ಸಂಜೆಯಲ್ಲಿ ಬೆಟ್ಟಕೆ
ಕೊಡಲು ಎದೆಯ ಕಟ್ಟೆಯೋಡೆದು ಚೆಲ್ಲುವ ಪ್ರೀತಿ ನಿನಗೆ
ನಿನ್ನ ಹೆಸರ ನೀರ ಮೇಲೆ ಬರೆಯಲಾಗದೆ
ಎದೆಯ ಒಳಗೆ ಅಚ್ಚೆಹುಯ್ದು ಮುಚ್ಚಿಟ್ಟಿರುವೆ


ಬೀಸೊ ತಂಗಾಳಿ ನೀನು, ಸ್ತಭ್ದನಾಗಿ ಹೋದೆನು ನಾನು
ಒಲವನು ನಿನ್ನ ಬಳಿಗೆ ಓಯ್ದು ತರುವೆನು
ನನ್ನ ಪ್ರೇಮ ದೇವತೆ, ವರವ ನೀಡು ಬೇಗನೆ
ಏನು ಮಾಯೆ ಮಾಡಿಹೆ, ಈ ಪಾಪಿಗೆ

Sunday, February 27, 2011

ಮೇಘದ ಮೇಲೇರಿ ಬರುತಾಳೆ ನನ್ನೋಳು..



ಮೇಘದ ಮೇಲೇರಿ ಬರುತಾಳೆ ನನ್ನೋಳು
ಮಾಗಿಯ ಕಾಲದ ಸವಿಜೇನು
ಶ್ರಾವಣದ ಕೋಗಿಲೆಯ ಕಂಠದ ಸಿರಿಯಿವಳು
ನನ್ನಿ ಹೃದಯವೆ ನಿಂಗೆ ಉಡುಗೊರೆಯು


ಸ್ವಾಗತಕೆ ನೂರು ಜನಪದರ ಹಾಡು
ನೀ ನನ್ನ ಮನದ ಲಾಲಿ ಹಾಡು
ನೀಲಿ ಬಾನಲ್ಲಿ, ಹೊಂಗಿರಣದ ರಥದಲ್ಲಿ
ನನ್ನನ್ನೆ ನೋಡುತ್ತ ನಗುತಿಹಳು


ಚೈತ್ರಾದ ಚಿಲುಮೆಯೆ ಸ್ಪೂರ್ತಿಯ ಸೆಲೆಯೆ
ಬಾ ಬೆಳ್ಳಿ ಬಾನ ಸಾಗರಿಯೆ
ರವಿಯ ರಥದಿ ಚಂದ್ರನ ಸಾರಥಿ
ಬಾ ಬೇಗ ನಿನಗಾಗಿ ನಾ ಕಾಯುತ್ತಿಹೆನೆ


ಹಸಿರ ಕಣಿವೆ ನೀಲಿ ಸಾಗರದ ಮೇಲೆ
ಬೆಳದಿಂಗಳ ತಂಪಾಗಿ ಬಾ ಮಡಿಲಿಗೆ
ನನ್ನ ಉಸಿರಿಗೆ ಉಸಿರಾಗಿ, ಜೀವಕ್ಕೆ ಜೊತೆಯಾಗಿ
ಸೇರುಬಾ ನನ್ನ ಹಂಸಕುಲೆ..


                    ಸುರೇಂದ್ರ ನಾಡಿಗ್ ಹೆಚ್. ಎಮ್

ಮದುವೆ



ಮದುವೆಯ ಬಂಧನ
ಹೃದಯಗಳ ಸಂಗಮ
ಜೀವನದ ಗೀತೆಗೆ
ಪ್ರೀತಿಯ ಸರಿಗಮ


ದೂರದ ದಿನಗಳ ಹಿಂದಿಕ್ಕಿ
ಜೊತೆಗೆ ಸಾಗಿವೆ ಜೋಡಿ ಹಕ್ಕಿ
ಸಂಸ್ಕೃತಿ ಸಂಬಂಧ ಬೆಳೆಸುವ ಬಂಧ
ಸಂಸಾರ ಗೀತೆಯ ಸಂಗೀತ ನಾದ


ಓಡೋ ಜೀವಗಳ ಜೋಡಿ ಮಾಡಿ
ಕೋಡುವ ಲೋಕಕೆ ಕೋಡುಗೆಯ..
ಪ್ರೀತಿಯ..

ಮನ ಕತ್ತಲೆಗೆ ಲಗ್ಗೆ




ಮರುಗಿದ ಮನ ಕತ್ತಲೆಗೆ ಲಗ್ಗೆ
ಬೆಳಕ ಕಂಡರೆ ಅದೇ ಸಿಹಿನೀರ ಬುಗ್ಗೆ
ದೀಪ ಬೆಳಗಿದರೆ ಸುತ್ತಲು ಬೆಳಕು
ಆತ್ಮ ಬೆಳಗಿದರೆ ಲೋಕಕೇ ಹುರುಪು

ಗತಕಾಲಗಳ ವೈಭವವ ನನೆದು ನೆನೆದು
ಮುಂದಿರುವ ಕತ್ತೆಲೆಯ ದಾರಿಗೆ
ದೀಪ ಹಚ್ಚುವುದೆ ಮರೆತೆವು

ಧರ್ಮಗ್ರಂಥಗಳ ಲೋಕ ತರ್ಕಗಳ
ಪಠಿಸುವುದ ಈ ಜೀವನ
ವೇದ ಘೋಷದ ನಡುವೆ
ಉಪನಿಷತ್ತುಗಳ ಗೊಡವೆ ಬೇಡ ಬೇಡ

ನಮ್ಮತನವೆಂಬ ಓಡವೆಯ ಮುಚ್ಚಿಡದೆ
ಧರಿಸಿದರೆ ನೀನೆ ಜನನಾಯಕ


Friday, February 25, 2011

ತಿಳಿದಿರುವುದೊಂದೆ.. ಅದು ನೀನೆ..!!



ಇನ್ನು ನೋಡಬೇಕು ನಿನ್ನ
ನೋಡುತಲೆ ಇರುವೆನು ಚಿನ್ನ
ಈ ದೇಹ ಕರಗಿಹೋದರು..
ಕಣ್ಣೊಂದು ಇರಲಿ ನಿನ್ನ ನೋಡಲೇಂದು

ನೀ ನಗುವೆ ಸುಮ್ಮನೆ ಕುಳಿತು
ನಾ ನಿನ್ನ ನೋಡದ ಹೊರತು
ಇರಲಾರೆ ಇನ್ನು ಸಾಕು ಸಾಕು

ಒಲವ ಸೋನೆ ಸುರಿದಿದೆ ಇಂದು
ಪ್ರೀತಿಸುವೆನು ನಿನ್ನನೆ ಎಂದು
ದೂರ ಎಲ್ಲೂ ಓಡದಿರು
ನಿನ್ನ ಪ್ರೇಮ ಬಿಕ್ಷುಕ ನಾನು

ಸಾವಿರಾರು ಮೈಲಿ ದೂರ
ಈಜಿ, ಓಡಿ ಬಂದು ನೇರ
ನಿನ್ನ ಅಪ್ಪಿ ಹೇಳುವೆ ಮಾತೊಂದ..
ಸಾವಿರಾರು ಜನಗಳ ನಡುವೆ
ನೀನು ಮಾತ್ರ ಕಾಣುವೆ ಏಕೆ?
ಏನು ಎಂದು ತಿಳಿಯದು ನಾಳೆ
ತಿಳಿದಿರುವುದೊಂದೆ.. ಅದು ನೀನೆ..!!

                         ಸುರೇಂದ್ರ ನಾಡಿಗ್ ಹೆಚ್ ಎಂ

Thursday, February 24, 2011

ಕದ್ದು ನಿನ್ನ ಕಡೆ ನೋಡುವಾಗಲೇ..

ನೆಡೆ ನೆಡೆ ನೆಡೆದು, ತುಡಿ ತುಡಿ ತುಡಿದು
ತಡವರಿಸಿತು ಹೃದಯ, ನಿನ್ನ ನೋಡಿದಾಗ
ನುಸು ನುಸು ಕನಸು, ಕ್ಷಣ ಕ್ಷಣಕು
ತೇವಗೊಂದಿದೆ ತನುವು, ಈಗ ಜೊತೆಯಾಗು
ಕಾಡಿದೆ ಮತ್ತೆ ಕಾಡಿದೆ, ಪ್ರೀತಿಯು ಶುರುವಾಗಿದೆ
ಕದ್ದು ನಿನ್ನ ಕಡೆ ನೋಡುವಾಗಲೇ, ಏನೊ ಒಂಥರ ಆಗಿದೆ

ಕೆಂದಾವರೆ ತೋಟದ ಒಡೆಯ ನಾನು ಇಲ್ಲಿಹೆ
ಮುದ್ದು ಗುಮ್ಮನಂತೆ ಬಂದು ನೀ ಹೃದಯ ಕದ್ದು ಒಯ್ದಿಹೆ
ಮುಂಜಾವೆದ್ದು ನಿನ್ನ ನನೆದು ನಿದಿರೆಗೆ ಮತ್ತೆ ಜಾರಿದೆ
ಕಣ್ಣಮುಚ್ಚಿ ತೆರೆಯುವ ತನಕ ನಿನ್ನ ಕನಸೆ ತುಂಬಿದೆ
ಮುಗಿಯದ ಮಾಯೆಯಿದು, ಪ್ರೇಮದ ಆಟವಿದು
ನೀ ಯಾರೆಂದು ಕೇಳಿದರೆ ಹೆಸರು ಹೇಳಲಾಗದು

ರಚ್ಚೆ ಹಿಡಿದೆ ನಿನಗಾಗಿ, ಕಚ್ಚಿದೆ ಒಲವು ಹಿತವಾಗಿ
ಮೆಚ್ಚಿರುವ ಮನಸೆ ನಿನ್ನ ನೆಚ್ಚಿರುವೆ ಕನಸೆ
ಕೂಗಿ ಹೇಳಬೇಕೆ ನಾನು? ಈ ಮೌನ ತಿಳಿಸದೇನು?
ನಿನ್ನ ನೆನೆದ ಕತ್ತಲು ಕೂಡ ಹಾಗೆಯೆ ಬೆಳಕಾಯ್ತು
ಗಡಿಯಾರ ನೆಡೆಯದೆ ನಿಂತು, ನೀ ಏಲ್ಲಿ ಏನು ಏಂತು?
ಹೇಳಿದೆ ನನ್ನಲಿ ಬಂದು, ನನ್ನ ಉಸಿರು ನೀನು ಏಂದು

ತಂಗಾಳಿ ನನ್ನ ಮನಸಿಂದು, ಬಿರುಗಾಳಿ ತಂದೆ ನೀನು
ಶಾಂತ ಕಡಲಂತೆ ನಾನು, ಸುನಾಮಿತಂತು ಒಲವು
ಸುಳಿಗೆ ಸಿಕ್ಕ ನಾವಿಕ ನಾನು, ಬದುಕೊ ಆಸೆ ನೀನು
ಪ್ರೇಮವೇ ಜೀವನದ ಮೊದಲ ಪಾಠವೊ..?

ಸುರೇಂದ್ರ ನಾಡಿಗ್ ಹೆಚ್ ಏಂ

Wednesday, February 23, 2011

ಪದಗಳ ಮರೆತ ಕವಿಯಾದೆನು ನಾ..!!

ನಿನ್ನ ಬರುವಿಕೆಗೆ ಕಾದಿರುವೆ, ಕ್ಷಣವು ಪರಿತಪಿಸಿರುವೆ
ಕಡಲ ಅಲೆಯ ಏಣಿಸುತ ತೀರದಿ ಬಿಡರ ಹೂಡಿರುವೆ
ಹೃದಯ ಹುಚ್ಚು ಕುದುರೆಯಂತೆ, ಸಾಗಿದೆ ಸಾಗರದಾಚೆ
ಕಚ್ಚಿದೆ ಒಲವು ಹೃದಯಕ್ಕೆ, ಮಂಪರು ಬಡಿದಿದೆ ಮನಸಿಗೆ

ಚಂದಿರನಿಗೆ ಊಟವ ಉಣಬಡಿಸಿ, ಕಟ್ಟಿರುವೆ ಕಡಲ ತಡಿಯಲ್ಲಿ
ಬಂದು ಕೂರು ಜೊತೆಯಲ್ಲಿ, ಖುಷಿಪಡುವೆನು ನಾನು ನಿನ್ನ ನೋಡಿ
ಹೇಗೆಂದು ಹೇಳಲೆ ಈ ಕ್ಷಣದಲ್ಲಿ
ಒಲವೆ ತುಂಬಿದೆ ಕಣಕಣದಲ್ಲಿ

ಕೋಟಿ ಜನರ ಊರಲಿ, ಏಲ್ಲೆಲ್ಲೂ ನೀನೆ
ಕಾಣದಾದೆ ಏನನು, ನೀ ನನ್ನ ಕಂಡ ಕ್ಷಣದಲೆ
ಮಾಟಗಾತಿ ನೀನು, ಜಗವನ್ನೆ ಮರೆಸಿರುವೆ ನನಗೆ
ನೀ ನೆಡೆದು ಬಂದ ನಿಮಿಷ ನಾ ಮರುಳನಾಗಿಹೇ
ಒಲವ ಬೇಲಿ ಹಾಕಿ ನಿನ್ನ ಹೃದಯ ಕೂಡಿಹಾಕಿದೆ
ಹೋರಗೆ ಬಿಡಲಾರೆ ಏಂದು ಈ ಜೀವ ನಶಿಸುವರೆಗೆ

ನೀರವ ಮೌನ ಜಗದಲ್ಲಿ, ಕೇಳಿದೆ ಎಲ್ಲ ನಿನ್ನ ದನಿಯಾಗಿ
ಸುಮ್ಮನೆ ಏನು ಹಾಡಲಿ ನಾ
ಪದಗಳ ಮರೆತ ಕವಿಯಾದೆನು ನಾ
ಕೇಳದ ಒಂದು ಮಾತಿನಲಿ ಎಲ್ಲ ಹೇಳುವೆ ಕೇಳುವೆಯ..?

ತಂಗಾಳಿ ಬೀಸಿದೆ ಹಿತವಾಗಿ, ಬಿಸಿಯೇರುತ ಎದೆಯ ಒಲವಾಗಿ
ಕಣ್ಣ ಮುಂದೆ ಮಂಜಾಗಿ, ಕರಗಿ ಹೂದೆ ನೀರಗಿ
ಹಿಂದೆ ಹಿಂದೆ ಬಂದರೆ ನಾ, ಮರೀಚಿಕೆ ನೀ ಮರೆಯಾದೆ
ಹೇಗೆಂದು ಹೇಳಲಿ ಒಲವನ್ನು ನಾನು
ಎದೆಯೊಳಗಡೆ ಹೊರಗಡೆ ಎಲ್ಲೇಲು ನೀನು

ಸುರೇಂದ್ರ ನಾಡಿಗ್ ಹೆಚ್.ಎಂ

ಚುಂಬಕ ಚಲುವೆ ಚುಂಬಿಸಲೆ..?

ಚುಂಬಕ ಚಲುವೆ ಚುಂಬಿಸಲೆ..?
ಕರೆಯೊಂದ ನೀಡು.. ನಾ ಬರುವೆ
ಹಗಲೊ ಇರುಳೊ ಆದರೇನು
ನಿನ್ನ ಏದುರು ಬಂದು ನಿಲ್ಲುವೇ
ಏನು ಮಾತನಾಡದೆ ತಬ್ಬಿಹಿಡಿಯುವೆ

ಹೆಚ್ಚು ಕಡಿಮೆ ದಿನ ಪೂರ ಒಂಟಿಯಾಗೆ ಕಳೆದೆನು
ನಿನ್ನ ನೆನಪಿನಲ್ಲಿ ನನ್ನೆ ನಾನು ಮರೆತೆನು
ತಿಳಿದು ತಿಳಿದು ತಿಳಿಯದ ಬುದ್ದಿಮಾಂದ್ಯ ನಾನು
ಏನೆಂದು ಹೇಳಲಿ? ನಿನ್ನದೆ ಹುಚ್ಚು
ನಿನ್ನ ಕೆನ್ನೆ ಗುಳಿಯ ಒಳಗೆ ಏಳೆದು
ನನ್ನ ಕೊಲ್ಲದಿರು

ಬದುಕೆಲ್ಲ ನಿನ್ನ ಮುದ್ದಾಡಲೆಂಬ ಬಯಕೆ
ಬಂದಿರುವುದೇಕೊ ಮನಕೆ, ತಡೆಯಲಾರೆನೆ..
ಅಚ್ಚೆ ಹಾಕಿ ಹೃದಯದ ಮೇಲೆ
ನಿನ್ನ ಹೆಸರೆ ಬರೆದೆ ಕಾರಣವೇನೆ?
ಸ್ವಚ್ಚ ಪ್ರೇಮಿ ನಾನಿರುವೆನು ನಿನಗೆ
ಏಂದೂ ಇರುವೆ ಹೀಗೆ...

ಸುರೇಂದ್ರ ನಾಡಿಗ್ ಹೆಚ್.ಏಂ