Wednesday, January 18, 2012

ಅಕಾರ ವಿಕಾರ ನನ್ನಂತರಾಳ


ಕನಸು ಕಾಣುವ ಕರ್ಮ
ಸಾವು ತಿಳಿದು ಬಾಳುವ ಜನ್ಮ
ಅಕಾರ ವಿಕಾರ ನನ್ನಂತರಾಳ


ಕುದಿಸಿದ ಹಾಲು ಕಳೆದು ಹುಳುವಾದಂತೆ
ದಿನಗಳೆದಂತೆ ನನ್ನ ಮನಸು ಹೊಲಸು
ಕಾಯಿಸಿದ ಕಬ್ಬಿಣವು ಕಳೆಗುಂದಿದಂತೆ
ಚೂರು ಚೂರು ನನ್ನಿ ಬಿರುಸು ಕನಸು


ಯಾರು ಅರಿಯದ ಮರ್ಮ, ತಿಳಿಯಲಾಗದ ತರ್ಕ
ಬದುಕ ಬಂಡಿಯು ತೆವಳೊ ಪರದೇಶಿ ಪರ್ವ
ಸಾಧನೆಗೂ ಸಂಧಾನ, ಮನಸಿಗೋ ಮಂಥನ
ನೋವು ನಲಿವಿದು ಇಲ್ಲಿ ನಿರಾಳ ನರಕ..!!


ಸರಿ ಕ್ಷಣವು ಏಕೆ ದೇವರನಾಮ, ಹೇಜ್ಜೆಗೊ ಓಮ್ಮೆ ರಾಮ ರಾಮ
ಸ್ಮ್ರುತಿಪಟಲ ಸಖಿಧಾಮ, ಜೊಳ್ಳು ತುಂಬಿದ ದೇಹದಿ ಸತ್ಯಕಾಮ
ತೊರೆಬಡಿದ ತೀರದಲಿ, ತೆರೆಯೆಳೆದ ಮಂಟಪದಿ
ಕುಂದದಾ ಕಂಬನಿಗೆ ಇಲ್ಲ ಕ್ಷಾಮ..!!


ನಶ್ವರತೆಯ ಕಾವಲೇ ಧರ್ಮ?
ಸುರಸ್ಪರ್ಶ ಸಡಿಲಿಪುದೆ ಸಂಘರ್ಷ?
ಅಕಾರ ವಿಕಾರ ನನ್ನಂತರಾಳ


                  - ಸುರೇಂದ್ರ ನಾಡಿಗ್

1 comment:

  1. ಮನದಲ್ಲಿನ ನೋವು ಮತ್ತು ಒಡೆದ ಕನಸುಗಳು, ನೋವುಗಳಿಂದ ಜರ್ಜರಿತವಾದ ಹೃದಯ ಮತ್ತು ಹತಾಶೆಯ ಸುಳಿಯಲ್ಲಿ ನರಳುತ್ತಿರುವ ಮನಸ್ಸಿನ ಚೂರಾದ ಭಾವಗಳು ಮಾತನಾಡಿವೆ.. ತೂಕಬದ್ದವಾದ ಪದಪ್ರಯೋಗ ಮನಗೆಲ್ಲುತ್ತದೆ..
    ಯಾರು ಅರಿಯದ ಮರ್ಮ, ತಿಳಿಯಲಾಗದ ತರ್ಕ
    ಬದುಕ ಬಂಡಿಯು ತೆವಳೊ ಪರದೇಶಿ ಪರ್ವ
    ಸಾಧನೆಗೂ ಸಂಧಾನ, ಮನಸಿಗೋ ಮಂಥನ
    ನೋವು ನಲಿವಿದು ಇಲ್ಲಿ ನಿರಾಳ ನರಕ..!!
    ಈ ಸಾಲುಗಳು ತುಂಬಾ ಕಾಡಿಸುತ್ತಿವೆ.. ತುಂಬಾ ಸೂಕ್ಷ್ಮವಾದ ಅಭಿವ್ಯಕ್ತಿ, ಮನಮುಟ್ಟುತ್ತದೆ..

    ReplyDelete