Wednesday, February 23, 2011

ಪದಗಳ ಮರೆತ ಕವಿಯಾದೆನು ನಾ..!!

ನಿನ್ನ ಬರುವಿಕೆಗೆ ಕಾದಿರುವೆ, ಕ್ಷಣವು ಪರಿತಪಿಸಿರುವೆ
ಕಡಲ ಅಲೆಯ ಏಣಿಸುತ ತೀರದಿ ಬಿಡರ ಹೂಡಿರುವೆ
ಹೃದಯ ಹುಚ್ಚು ಕುದುರೆಯಂತೆ, ಸಾಗಿದೆ ಸಾಗರದಾಚೆ
ಕಚ್ಚಿದೆ ಒಲವು ಹೃದಯಕ್ಕೆ, ಮಂಪರು ಬಡಿದಿದೆ ಮನಸಿಗೆ

ಚಂದಿರನಿಗೆ ಊಟವ ಉಣಬಡಿಸಿ, ಕಟ್ಟಿರುವೆ ಕಡಲ ತಡಿಯಲ್ಲಿ
ಬಂದು ಕೂರು ಜೊತೆಯಲ್ಲಿ, ಖುಷಿಪಡುವೆನು ನಾನು ನಿನ್ನ ನೋಡಿ
ಹೇಗೆಂದು ಹೇಳಲೆ ಈ ಕ್ಷಣದಲ್ಲಿ
ಒಲವೆ ತುಂಬಿದೆ ಕಣಕಣದಲ್ಲಿ

ಕೋಟಿ ಜನರ ಊರಲಿ, ಏಲ್ಲೆಲ್ಲೂ ನೀನೆ
ಕಾಣದಾದೆ ಏನನು, ನೀ ನನ್ನ ಕಂಡ ಕ್ಷಣದಲೆ
ಮಾಟಗಾತಿ ನೀನು, ಜಗವನ್ನೆ ಮರೆಸಿರುವೆ ನನಗೆ
ನೀ ನೆಡೆದು ಬಂದ ನಿಮಿಷ ನಾ ಮರುಳನಾಗಿಹೇ
ಒಲವ ಬೇಲಿ ಹಾಕಿ ನಿನ್ನ ಹೃದಯ ಕೂಡಿಹಾಕಿದೆ
ಹೋರಗೆ ಬಿಡಲಾರೆ ಏಂದು ಈ ಜೀವ ನಶಿಸುವರೆಗೆ

ನೀರವ ಮೌನ ಜಗದಲ್ಲಿ, ಕೇಳಿದೆ ಎಲ್ಲ ನಿನ್ನ ದನಿಯಾಗಿ
ಸುಮ್ಮನೆ ಏನು ಹಾಡಲಿ ನಾ
ಪದಗಳ ಮರೆತ ಕವಿಯಾದೆನು ನಾ
ಕೇಳದ ಒಂದು ಮಾತಿನಲಿ ಎಲ್ಲ ಹೇಳುವೆ ಕೇಳುವೆಯ..?

ತಂಗಾಳಿ ಬೀಸಿದೆ ಹಿತವಾಗಿ, ಬಿಸಿಯೇರುತ ಎದೆಯ ಒಲವಾಗಿ
ಕಣ್ಣ ಮುಂದೆ ಮಂಜಾಗಿ, ಕರಗಿ ಹೂದೆ ನೀರಗಿ
ಹಿಂದೆ ಹಿಂದೆ ಬಂದರೆ ನಾ, ಮರೀಚಿಕೆ ನೀ ಮರೆಯಾದೆ
ಹೇಗೆಂದು ಹೇಳಲಿ ಒಲವನ್ನು ನಾನು
ಎದೆಯೊಳಗಡೆ ಹೊರಗಡೆ ಎಲ್ಲೇಲು ನೀನು

ಸುರೇಂದ್ರ ನಾಡಿಗ್ ಹೆಚ್.ಎಂ

1 comment:

  1. Its not Fare..!!You Have Translated This Summary in http://justnadig.blogspot.com/2011/01/i-am-poet-who-forgot-words.html
    But its a good one
    You should be too sensitive when you posts like this... you have great spectators around you to observe like this. But it helps Non Kannadigas to understand what you have written..

    ReplyDelete